CrimeDistricts

IDFC ಬ್ಯಾಂಕ್‌ ಉದ್ಯೋಗಿ ಆತ್ಮಹತ್ಯೆ!; ಡೆತ್‌ನೋಟ್‌ನಲ್ಲಿ ಕಾರಣ ಬಹಿರಂಗ!

ಚಿತ್ರದುರ್ಗ; ಮಧ್ಯಪ್ರದೇಶದಲ್ಲಿ IDFC ಬ್ಯಾಂಕ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ರಾಜ್ಯದ ಉದ್ಯೋಗಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದಲ್ಲಿರುವ ಲಾಡ್ಜ್‌ ಒಂದರಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಬ್ಯಾಂಕ್‌ ಉದ್ಯೋಗಿ ಸಂತೋಷ್‌ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಡೆತ್‌ನೋಟ್‌ ಸಿಕ್ಕಿದ್ದು, ಅದರಲ್ಲಿ ಸಾವಿಗೆ ಕಾರಣಗಳನ್ನು ಬರೆಯಲಾಗಿದೆ..

ಇದನ್ನೂ ಓದಿ; ಸಿಸಿಬಿ ಇನ್ಸ್‌ಪೆಕ್ಟರ್‌ ತಿಮ್ಮೇಗೌಡ ಆತ್ಮಹತ್ಯೆ!; ಅಮಾನತಾಗಿದ್ದರಿಂದ ಖಿನ್ನತೆ!

36 ವರ್ಷದ ಸಂತೋಷ್‌ ಅವರು ಮಧ್ಯಪ್ರದೇಶದಲ್ಲಿ IDFC ಬ್ಯಾಂಕ್‌ ಶಾಖೆಯೊಂದರಲ್ಲಿ ಕೆಲಸ ಮಾಡುತ್ತಿದ್ದರಂತೆ.. ಅವರಿಗೆ ಮೇಲಿನ ಅಧಿಕಾರಿಗಳು ತೀವ್ರವಾಗಿ ಕಿರುಕುಳ ಕೊಡುತ್ತಿದ್ದರಂತೆ.. ಹೀಗಾಗಿ ಕರ್ನಾಟಕಕ್ಕೆ ವರ್ಗಾವಣೆ ಕೋರಿದ್ದಾರೆ.. ಅದಕ್ಕೂ ಕೂಡಾ ಕಾಟ ಕೊಟ್ಟಿದ್ದಾರೆ.. 2 ಲಕ್ಷ ರೂಪಾಯಿ ಲಂಚ ನೀಡಿದರೆ ಮಾತ್ರ ಟ್ರಾನ್ಸ್‌ಫರ್‌ ಕೊಡುತ್ತೇವೆ ಎಂದು ಹೇಳಿದ್ದರಂತೆ.. ಇದರಿಂದ ಮನನೊಂದಿದ್ದ ಸಂತೋಷ್‌, ಹೊಸದುರ್ಗಗಕ್ಕೆ ಬಂದು ಲಾಡ್ಜ್‌ನಲ್ಲಿ ರೂಮ್‌ ಬಾಡಿಗೆಗೆ ಪಡೆದಿದ್ದಾರೆ.. ಅಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..
ಸ್ಥಳಕ್ಕೆ ಹೊಸದುರ್ಗ ಠಾಣೆ ಸಿಪಿಐ ತಿಮ್ಮಣ್ಣ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ..

ಇದನ್ನೂ ಓದಿ; ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಸಿದ್ದರಾಮಯ್ಯ ಅಭಿಮಾನಿ!

Share Post