CrimeDistricts

ಅಂಕೋಲಾ ಬಳಿ ಗುಡ್ಡ ಕುಸಿತ ಪ್ರಕರಣ; 7 ಮಂದಿ ದುರ್ಮರಣ, ಇಬ್ಬರು ನಾಪತ್ತೆ!

ಕಾರವಾರ; ಅಂಕೋಲಾದ ಶಿರೂರು ಬಳಿ ಭೀಕರ ಗುಡ್ಡ ಕುಸಿತದಲ್ಲಿ ಏಳು ಮಂದು ಮೃತಪಟ್ಟಿರುವುದು ದೃಢಪಟ್ಟಿದೆ.. ರಸ್ತೆ ಅಡ್ಡಲಾಗಿ ಭಾರೀ ಗಾತ್ರದಲ್ಲಿ ಮಣ್ಣು ಕುಸಿದಿದ್ದರಿಂದ ಈ ದುರಂತ ನಡೆದಿದೆ.. ಘಟನೆಯಲ್ಲಿ ಸಾವನ್ನಪ್ಪಿದ ಏಳು ಮಂದಿಯಲ್ಲಿ ಐವರು ಒಂದೇ ಕುಟುಂಬದವರು ಅನ್ನೋದು ದುಃಖಕರ ಸಂಗತಿ.. ಇನ್ನೂ ಇಬ್ಬರು ಮಣ್ಣಿನಡಿ ಇರಬಹುದು ಎಂದು ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ..

ಇದನ್ನೂ ಓದಿ; ಕಾರು ಕೊಡಿಸಲು ಹಣವಿಲ್ಲ ಎಂದಿದ್ದಕ್ಕೆ ಮಗಳೇ ತಾಯಿಗೆ ವಿಷ ಕುಡಿಸಿದಳು..!

ಲಕ್ಷ್ಮಣ ನಾಯ್ಕ (47), ಶಾಂತಿ ನಾಯ್ಕ (36), ರೋಶನ್ (11), ಅವಂತಿಕಾ (6), ಜಗನ್ನಾಥ (55) ಎಂಬ ಒಂದೇ ಕುಟುಂಬದ ಐವರು ಮಣ್ಣಿನಡಿ ಸಿಲುಕಿದ್ದಾರೆ.. ಕಾರಿನಲ್ಲಿ ಹೋಗುತ್ತಿದ್ದಾಗ ಗುಡ್ಡ ಕುಸಿದಿದೆ.. ಗುಡ್ಡ ಕುಸಿಯುತ್ತಿರುವ ದೃಶ್ಯ ನೋಡಿ ಕಾರು ನಿಲ್ಲಿಸಿ ಹಿಂದಕ್ಕೆ ತೆಗೆದುಕೊಳ್ಳಲಾಗುತ್ತಿತ್ತು. ಆದ್ರೆ ಕಾರಿನ ಮೇಲೆಯೇ ಗುಡ್ಡ ಕುಸಿದಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; 7ನೇ ತರಗತಿ ಬಾಲಕಿ ಗ್ಯಾಸ್‌ ಡೆಲಿವರಿ ಬಾಯ್‌ ಮನೆಯಲ್ಲಿ ಅನುಮಾನಾಸ್ಪದ ಸಾವು!

ಇನ್ನು ಹತ್ತಿರದಲ್ಲೇ ಟೀ ಅಂಗಡಿ ಕೂಡಾ ಇತ್ತು. ಅದರಲ್ಲಿ ನಾಲ್ಕು ಜನ ಇದ್ದರು ಎನ್ನಲಾಗಿದ್ದು, ಅದರ ಮೇಲೂ ಗುಡ್ಡ ಕುಸಿದಿದೆ.. ಇನ್ನು ಮಣ್ಣು ಕುಸಿದ ರಭಸಕ್ಕೆ ಗ್ಯಾಸ್‌ ಟ್ಯಾಂಕರ್‌ ನದಿಯಲ್ಲಿ ಕೊಚ್ಚಿಕೊಂಡು ಹೋಗಿದೆ..

Share Post