CrimeNational

ಕುಡಿದ ಮತ್ತಿನಲ್ಲಿ ಬಾಂಬ್‌ ಕಚ್ಚಿದ; ಸ್ಫೋಟಗೊಂಡು ವ್ಯಕ್ತಿ ಸಾವು!

ಹೈದರಾಬಾದ್‌; ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಾಂಬ್‌ ಕಚ್ಚಿದ್ದು, ಅದು ಬಾಯಲ್ಲೇ ಸ್ಪೋಟಗೊಂಡು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಬಂಗಾರುಪಾಲೆಂ ಮಂಡಲದ ಗದ್ದಂವಾರಿಪಲ್ಲಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

35 ವರ್ಷದ ಗದ್ದಂವಾರಿಪಲ್ಲಿ ನಿವಾಸಿ ಎಂ ಚಿರಂಜೀವಿ ಎಂಬಾತನೇ ಸಾವನ್ನಪ್ಪಿದ ವ್ಯಕ್ತಿ. ಆತ ಕುಡಿದ ಮತ್ತಿನಲ್ಲಿ ಕಂಟ್ರಿ ಬಾಂಬ್​ ಅನ್ನು ಕಚ್ಚಿದ್ದರಿಂದ ಈ ದರ್ಘಟನೆ ನಡೆದಿದೆ. ಚಿರಂಜೀವಿ ತನ್ನ ಪತ್ನಿ ಜತೆ ಜಗಳ ಮಾಡಿಕೊಂಡು ಹೋಗಿದ್ದ. ಜೊತೆಗೆ ಖಿನ್ನತೆಗೂ ಒಳಗಾಗಿದ್ದ ಎಂದು ತಿಳಿದುಬಂದಿದೆ.

 

Share Post