CrimeNational

ಅಡುಗೆ ಮಾಡಲಿಲ್ಲ ಅಂತ ವ್ಯಕ್ತಿಯನ್ನು ಹೊಡೆದು ಸಾಯಿಸಿದ ಸ್ನೇಹಿತರು!

ಹೈದರಾಬಾದ್‌; ಸಮಯಕ್ಕೆ ಸರಿಯಾಗಿ ರೂಮ್‌ ನಲ್ಲಿ ಅನ್ನ ಮಾಡಿರಲಿಲ್ಲ ಎಂಬ ಕಾರಣಕ್ಕೆ ರೂಮ್ಸ್‌ ಮೇಟ್ಸ್‌ ತಮ್ಮ ಸ್ನೇಹಿತನನ್ನೇ ಚೆನ್ನಾಗಿ ಬಡಿದು ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.. ಈ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.. ಕೆಲ ದಿನದ ಹಿಂದೆ ಈ ಕೃತ್ಯ ಎಸಗಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ..

ಇದನ್ನೂ ಓದಿ; ಬಳ್ಳಾರಿಯಲ್ಲಿ ಮೂಟೆಗಟ್ಟಲೆ ಚಿನ್ನ-ಬೆಳ್ಳಿ, ಕಂತೆ ಕಂತೆ ಹಣ ಜಪ್ತಿ!

ರಾಜಸ್ಥಾನ ಮೂಲದ ವ್ಯಕ್ತಿಯ ಬರ್ಬರ ಕೊಲೆ;

ಇತ್ತೀಚೆಗೆ ಮನುಷ್ಯ ಸಂಬಂಧಗಳು ತುಂಬಾನೇ ಹದಗೆಡುತ್ತಿವೆ.. ಸಣ್ಣ ಪುಟ್ಟ ವಿಷಯಗಳಿಗೂ ಮನುಷ್ಯ ರೆಬಲ್‌ ಆಗುತ್ತಿದ್ದಾನೆ.. ಪ್ರಾಣ ತೆಗೆಯುವ ಕೆಲಸ ನಡೆಯುತ್ತಿದೆ.. ಕ್ಷಣಿಕ ಕೋಪಕ್ಕೆ ಪ್ರಾಣಗಳೇ ಹೋಗುತ್ತಿವೆ.. ಹೈದರಾಬಾದ್‌ನ ಜೀಡಮೆಟ್ಲದಲ್ಲಿ ರಾಜಸ್ಥಾನ ಹಾಗೂ ಬಿಹಾರದ ಒಂದಷ್ಟು ಕಾರ್ಮಿಕರು ರೂಮ್‌ ಮಾಡಿಕೊಂಡಿದ್ದಾರೆ.. ಇನ್ನು 38 ವರ್ಷದ ರಾಜಸ್ಥಾನದ ಹನ್ಸ್‌ರಾಮ್‌ ಕುತ್ಬುಳ್ಳಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ.. ಆದ್ರೆ ಕುಡಿತದ ದಾಸನಾಗಿದ್ದ ಈತ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ.. ಈ ಕಾರಣಕ್ಕೆ ಪತ್ನಿ ತವರಿಗೆ ಹೋಗಿಬಿಟ್ಟಿದ್ದಳು.. ಇದರಿಂದ ಮನೆ ಖಾಲಿ ಮಾಡಿದ್ದ ಈತ ಜೀಡಮೆಟ್ಲದ ಸ್ನೇಹಿತರ ರೂಮ್‌ನಲ್ಲಿದ್ದ.. ಇನ್ನು ಈತನ ಸ್ನೇಹಿತ ಬಿನಯ್‌ ಸಿಂಗ್‌ ಸೇರಿ ಹಲವು ಸ್ಥಳೀಯ ಗ್ರಾನೈಟ್‌ ವ್ಯಾಪಾರಿಯೊಬ್ಬರ ಬಳಿ ಕೆಲಸ ಮಾಡುತ್ತಿದ್ದರು.. ಸಂಜೆ ರೂಮ್‌ನಲ್ಲಿ ಬಿನಯ್‌ ಸೂಕ್ತ ಸಮಯಕ್ಕೆ ಅನ್ನ ಮಾಡಿಲ್ಲ ಎಂಬ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ.. ಈ ವೇಳೆ ಹನ್ಸ್‌ ರಾಜ್‌ ಮೇಲೂ ದಾಳಿ ಮಾಡಲಾಗಿದ್ದು, ಹನ್ಸ್‌ರಾಜ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ; ಮೋದಿ ಮತ್ತೆ ಪ್ರಧಾನಿಯಾಗಲೆಂದು ಬೆರಳನ್ನೇ ಕತ್ತರಿಸಿ ಕಾಳಿ ದೇವಿಗೆ ಅರ್ಪಣೆ!

ಕೊಲೆ ಮಾಡಿ ಆರೋಪಿಗಳು ಪರಾರಿ;

ಕೊಲೆ ಮಾಡಿದವರು ಬಿಹಾರ ಮೂಲದ ಸೋನು ತಿವಾರಿ ಹಾಗೂ ಉತ್ತರ ಪ್ರದೇಶ ಮೂಲದ ಸಂದೀಪ್‌ ಎಂದು ಗುರುತಿಸಲಾಗಿದೆ.. ಇಬ್ಬರೂ ಕೊಲೆ ಮಾಡಿದ ನಂತರ ಪರಾರಿಯಾಗಿದ್ದಾರೆ.. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.. ಮನೆ ಮಾಲೀಕ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ; ಉದ್ಯೋಗ ಕಳೆದುಕೊಂಡರೆ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತಾ..?

 

Share Post