CrimeNational

ದೇವರಿಗೆ ಕೈಮುಗಿಯುವ ನಾಟಕ; ದೇವರ ಮಾಂಗಲ್ಯ ಸರ ಕದ್ದ ಕಳ್ಳ!

ಹೈದರಾಬಾದ್; ದೇವಸ್ಥಾನವೊಂದರಲ್ಲಿ ಕಳ್ಳನೊಬ್ಬ ದೇವರಿಗೆ ಕೈಮುಗಿಯುವ ನಾಟಕವಾಡುತ್ತಾ ದೇವಿಗೆ ಕೊರಳಲ್ಲಿದ್ದ ಚಿನ್ನ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ.. ಆಂಧ್ರಪ್ರದೇಶದ ಸತ್ರಂಪಾಡು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ..

ಇದನ್ನೂ ಓದಿ; ಅಡುಗೆ ಮಾಡಲಿಲ್ಲ ಅಂತ ವ್ಯಕ್ತಿಯನ್ನು ಹೊಡೆದು ಸಾಯಿಸಿದ ಸ್ನೇಹಿತರು!

ಸೌಭಾಗ್ಯಲಕ್ಷ್ಮೀ ದೇಗುಲದಲ್ಲಿ ಕಳ್ಳನ ಕೃತ್ಯ;

ಸತ್ರಂಪಾಡು ಗ್ರಾಮದ ಸೌಭಾಗ್ಯಲಕ್ಷ್ಮೀ ದೇಗುಲದಲ್ಲಿ ವ್ಯಕ್ತಿಯೊಬ್ಬ ಭಕ್ತನಂತೆ ಬಂದಿದ್ದಾನೆ.. ದೇವಿಗೆ ಕೈಮುಗಿದಿದ್ದಾನೆ.. ಅನಂತರ ದೇಗುಲದಲ್ಲಿ ಯಾರೂ ಇಲ್ಲದ್ದನ್ನು ಖಾತ್ರಿ ಮಾಡಿಕೊಂಡಿದ್ದಾನೆ.. ಕೂಡಲೇ ಆತ ತನ್ನ ಕೈಚಳಕ ತೋರಿಸಿದ್ದಾನೆ.. ದೇವಸ್ಥಾನದಲ್ಲಿ ಯಾರೂ ಇದ್ದನ್ನು ಗಮನಿಸಿದ ಕಳ್ಳ, ಕೂಡಲೇ ಗರ್ಭಗುಡಿಗೆ ನುಗ್ಗಿ ದೇವಿಯ ಮೈಮೇಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಇದನ್ನೂ ಓದಿ; ಬಳ್ಳಾರಿಯಲ್ಲಿ ಮೂಟೆಗಟ್ಟಲೆ ಚಿನ್ನ-ಬೆಳ್ಳಿ, ಕಂತೆ ಕಂತೆ ಹಣ ಜಪ್ತಿ!

ಮಾಸ್ಕ್‌ ಧರಿಸಿಕೊಂಡು ಬಂದಿದ್ದ ಕಳ್ಳ;

ಆರೋಪಿ ಮೊದಲೇ ಕಳ್ಳತನಕ್ಕೆ ಸ್ಕೆಚ್‌ ಹಾಕಿಕೊಂಡು ಬಂದಂತೆ ಕಾಣುತ್ತಿದೆ.. ಯಾಕಂದ್ರೆ ಆ ಕಳ್ಳ ಮಾಸ್ಕ್‌ ಹಾಕಿಕೊಂಡೇ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾನೆ.. ದೇವಿಗೆ ನಮಸ್ಕರಿಸುವ ನಾಟಕವಾಡಿದ್ದಾನೆ.. ಜೊತೆಗೆ ದೇಗುಲದಲ್ಲಿ ಯಾರೂ ಇಲ್ಲದ ಸಮಯವನ್ನು ಕಾಯುತ್ತಾ ಈ ಕೆಲಸ ಮಾಡಿದ್ದಾನೆ..ಈ ದೃಶ್ಯ ದೇಗುಲದಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಇದರ ಆಧಾರದ ಮೇಲೆ ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ.. ಇನ್ನೊಂದೆಡೆ ದೇವಸ್ಥಾನದ ಆಡಳಿತ ಮಂಡಳಿಯವರು ಸೋಷಿಯಲ್‌ ಮೀಡಿಯಾದಲ್ಲಿ ಈ ದೃಶ್ಯವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ; ಮೋದಿ ಮತ್ತೆ ಪ್ರಧಾನಿಯಾಗಲೆಂದು ಬೆರಳನ್ನೇ ಕತ್ತರಿಸಿ ಕಾಳಿ ದೇವಿಗೆ ಅರ್ಪಣೆ!

Share Post