CrimeDistricts

ಮಠಕ್ಕೆ ನುಗ್ಗಿ ಶ್ರೀಗಳನ್ನು ಬೆದರಿಕೆ ಲಕ್ಷಾಂತರ ರೂಪಾಯಿ ದರೋಡೆ!

ರಾಯಚೂರು; ಮಠಕ್ಕೆ ಮುಗ್ಗಿದ ದರೋಡೆಕೋರರು ಸ್ವಾಮೀಜಿಯನ್ನು ಬೆದರಿಸಿ, ಮಠದಲ್ಲಿದ್ದ ಚಿನ್ನಾಭರಣ ಹಾಗೂ ಲಕ್ಷಾಂತರ ರೂಪಾಯಿ ನಗರನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.. ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ಈ ಘಟನೆ ನಡೆದಿದೆ..

ಗುರುವಾರ ರಾತ್ರಿ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿ ಒಬ್ಬರೇ ಇದ್ದರು.. ಈ ವೇಳೆ ಮಠಕ್ಕೆ ನುಗ್ಗಿರುವ ದರೋಡೆಕೋರರು, ಸ್ವಾಮೀಜಿಯನ್ನು ಬೆದರಿಸಿದ್ದಾರೆ.. ಅನಂತರ ಮಠದಲ್ಲಿ ಸುಮಾರು 20 ಲಕ್ಷ ರೂಪಾಯಿ ನಗದು, 80 ಗ್ರಾಂ ಚಿನ್ನ ಹಾಗೂ 7 ಕೆಜಿ ಬೆಳ್ಳಿ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.. ದರೋಡೆಕೋರರು ಅಲ್ಲಿಂದ ತೆರಳಿದ ನಂತರ ಸ್ವಾಮೀಜಿ ಕಿರುಚಿಕೊಂಡಿದ್ದು, ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ..

ನಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು.. ಪೊಲೀಸ್​ ಇನ್ಸ್​​ಸ್ಪೆಕ್ಟರ್​​ ಪುಂಡಲಿಕ್​ ಪಟತ್ತರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

 

Share Post