Crime

38 ಪಾರಿವಾಳ, ಒಂದು ಕೊಲೆ; ಮೈಸೂರಿನಲ್ಲಿ ಏನಿದು ರಾದ್ಧಾಂತ..?

ಮೈಸೂರು: ಸಂಕ್ರಾಂತಿ ಹಬ್ಬದ ದಿನದಂದು ಕಳುವಾದ ಮೂವತ್ತೆಂಟು ಪಾರಿವಾಳಗಳ ವಿಚಾರ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ನಲವತ್ತೊಂಬತ್ತು ವರ್ಷದ ಗೋವಿಂದ ರಾಜು ಎಂಬುವವರು ಹತ್ಯೆಯಾಗಿದ್ದಾರೆ. ಕೆ.ಆರ್‌.ಪೊಲೀಸ್‌ ಠಾಣಾ ವ್ಯಾಪ್ತಿಯ ಸುಣ್ಣದ ಕೇರಿಯಲ್ಲಿ ಈ ಘಟನೆ ನಡೆದಿದೆ.

ಕೊಲೆ ಮಾಡಿದ ಮನೋಜ್‌ನಾಯಕ್‌, ಜಯಶಂಕರ್‌ ಎಂಬುವವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.  ವಿನಾಯಕ್, ಪ್ರಮೋದ್‌ನಾಯಕ್ ಎಂಬುವವರು ಪರಾರಿಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ.

ಕೊಲೆಯಾದ ಗೋವಿಂದ ರಾಜ ಅವರ ಪುತ್ರ ಉಲ್ಲಾಸ್‌ ಪಾರಿವಾಳ ಸಾಕಿದ್ದ. ಆಂದ್ರೆ ಸಂಕ್ರಾಂತಿ ದಿನ ರಾತ್ರಿ ಅವರ ಮನೆಯಲ್ಲಿದ್ದ 38 ಪಾರಿವಾಳಗಳು ಕಳುವಾಗಿದ್ದವು. ಎದುರು ಮನೆಯವರೇ ಈ ಕಳವು ಮಾಡಿರಬಹುದು ಎಂಬ ಉಂಟಾಗಿತ್ತು. ಈ ಸಂಬಂಧವಾಗಿ ನಡೆದ ಜಗಳದಲ್ಲಿ ಉಲ್ಲಾಸ್‌ ತಂದೆ ಹತರಾಗಿದ್ದಾರೆ.

 

Share Post