CrimeDistricts

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ; ತನಿಖಾಧಿಕಾರಿಯಾಗಿ ಸುಂದರ್‌ ರಾಜ್‌ ನೇಮಕ

ಚಾಮರಾಜನಗರ; ಕೊಡಗು ಪ್ರವಾಸದ ವೇಳೆ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಪ್ರಕರಣದ ತನಿಖಾಧಿಕಾರಿಯಾಗಿ ಚಾಮರಾಜನಗರ ಎಎಸ್​ಪಿ ಕೆ.ಎಸ್ ಸುಂದರ್ ರಾಜ್ ಅವರನ್ನು ನೇಮಕ ಮಾಡಲಾಗಿದೆ.

   ಆಗಸ್ಟ್‌ ೧೮ರಂದು ಸಿದ್ದರಾಮಯ್ಯ ಕೊಡಗು ಭೇಟಿ ವೇಳೆ ಯಾರಿಂದ ತಪ್ಪಾಗಿದೆ..?, ಯಾರಿಂದ ಕರ್ತವ್ಯ ಲೋಪವಾಗಿದೆ..?  ಹಾಗೂ ಅಹಿತಕರ ಘಟನೆ ಹಿಂದೆ ಯಾರಿದ್ದಾರೆ..? ಎಂಬ ಸಮಗ್ರ ತನಿಖೆಗೆ ಆದೇಶಿಸಲಾಗಿದೆ.  ಸುಂದರ್ ರಾಜ್  ಅವರು ಆದಷ್ಟು ಬೇಗ ತನಿಖೆ ನಡೆಸಿ,  ಶೀಘ್ರವೇ ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸಲಿದ್ದಾರೆ.

  ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಕಳೆದ 18 ರಂದು ನೆರೆ ಹಾನಿ ವೀಕ್ಷಣೆಗೆ ತೆರಳಿದ್ದ ವೇಳೆ ಅವರ ಕಾರಿನ ಮೇಲೆ ಮೊಟ್ಟೆ ಎಸೆದು, ಸಾವರ್ಕರ್ ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.‌

Share Post