CrimeNational

ವಾಂತಿ ಬಂತೆಂದು ಬಸ್ಸಿನಿಂದ ತಲೆ ಹೊರಗಾಕಿದ ಮಹಿಳೆ; ಕ್ಷಣಾರ್ಧದಲ್ಲಿ ನಡೆದೋಯ್ತು ದುರಂತ..!

ಲಖನೌ (ಉತ್ತರಪ್ರದೇಶ);  ಇತ್ತೀಚೆಗೆ ಮಂಡ್ಯದ ಬಳಿ ಮಹಿಳೆಯೊಬ್ಬರು ಬಸ್ಸಿನಲ್ಲಿ ಕಿಟಕಿಯಿಂದ ಹೊರಗೆ ಕೈ ಹಾಕಿ ಪ್ರಯಾಣ ಮಾಡುತ್ತಿದ್ದಳು. ಈ ವೇಳೆ ಪಕ್ಕದಲ್ಲಿ ಬಂದ ವಾಹನವೊಂದು ಉಜ್ಜಿಕೊಂಡು ಹೋದ ಪರಿಣಾಮ ಆಕೆಯ ಕೈ ಸಂಪೂರ್ಣ ಕಟ್‌ ಆಗಿ ಬಿದ್ದಿತ್ತು. ಇಂತಹ ಘಟನೆಗಳು ಆಗಾಗ ನಡೆಯುತ್ತಿದ್ದರೂ ಜನ ಎಚ್ಚೆತ್ತುಕೊಂಡಿಲ್ಲ. ಇದೀಗ ಉತ್ತರ ಪ್ರದೇಶದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು, ಮಹಿಳೆಯೊಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಹರಿಯಾಣ ರೋಡ್‌ವೇಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಅಲಿಪುರ ಪ್ರದೇಶಕ್ಕೆ ಬಂದಾಗ ವಾಂತಿ ಬಂದಿದೆ. ಹೀಗಾಗಿ ಆಕೆ ಕಿಟಕಿಯಿಂದ ತಲೆಯನ್ನು ಹೊರಹಾಕಿದ್ದಾರೆ. ಇದೇ ವೇಳೆ ಮತ್ತೊಂದು ವಾಹನ ಪಕ್ಕದಲ್ಲೇ ಬಂದಿದ್ದು, ಎರಡೂ ವಾಹನಗಳು ಉಜ್ಜಿಕೊಂಡಿವೆ. ಇದರಿಂದಾಗಿ ಎರಡೂ ವಾಹನಗಳ ನಡುವೆ ಸಿಲುಕಿ ಮಹಿಳೆಯ ತಲೆ ನಜ್ಜುಗುಜ್ಜಾಗಿದೆ.

ಮೃತ ಮಹಿಳೆಯನ್ನು ಬಾಬ್ಲಿ ಎಂದು ಗುರುತಿಸಲಾಗಿದ್ದು, ಈಕೆ ಉತ್ತರ ಪ್ರದೇಶದ ಪ್ರತಾಪಗಢದಿಂದ ಬಂದಿದ್ದು, ಕಾಶ್ಮೀರ್‌ ಗೇಟ್‌ನಿಂದ ಲೂದಿಯಾನಕ್ಕೆ ತೆರಳಲು ಬಸ್‌ ಹತ್ತಿದ್ದಳು ಎಂದು ತಿಳಿದುಬಂದಿದೆ. ಬಬ್ಲಿ ಜೊತೆ ಆಕೆಯ ಸಹೋದರಿ, ಪತಿ ಹಾಗೂ ಮೂವರು ಮಕ್ಕಳು ಕೂಡಾ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ.

 

Share Post