BengaluruCrime

ಬೆಂಗಳೂರಲ್ಲಿ ಹಾಡಹಗಲೇ ಗುಂಡಿನ ದಾಳಿ; ಕೊಡಿಗೇಹಳ್ಳಿಯಲ್ಲಿ ನಡೆದಿದ್ದೇನು..?

ಬೆಂಗಳೂರು; ಬೆಂಗಳೂರಿನಲ್ಲಿ ಯಾವ ಸಮಯದಲ್ಲಿ ಯಾವ ಅನಾಹುತ ಆಗುತ್ತದೋ ಗೊತ್ತಿಲ್ಲ.. ಯಾವ ಸ್ಥಳಕ್ಕೆ ಯಾವ ಆಗಂತುಕರೋ ಬರುತ್ತಾರೋ ಅರ್ಥವಾಗುವುದಿಲ್ಲ.. ಎಲ್ಲರೂ ನೋಡನೋಡುತ್ತಿದ್ದಂತೆಯೇ ದುಷ್ಕೃತ್ಯಗಳು ನಡೆದುಹೋಗುತ್ತಿರುತ್ತವೆ.. ಇವತ್ತು ಬೆಳಗ್ಗೆ ಕೂಡಾ ಅಂತಹದ್ದೇ ಒಂದು ಘಟನೆ ನಡೆದಿದೆ..

ಬೈಕ್‌ನಲ್ಲಿ ಬಂದು ಗುಂಡಿನ ದಾಳಿ;

ಬೆಂಗಳೂರು ನಗರದ ಕೊಡಿಗೇಹಳ್ಳಿ ವ್ಯಾಪ್ತಿಯ ದೇವಿನಗರದಲ್ಲಿ ಲಕ್ಷ್ಮೀ ಜುವೆಲರಿ ಅಂಗಡಿ ಇದೆ.. ಇಲ್ಲಿಗೆ ಇಂದು ಬೆಳಗ್ಗೆ 11ಗಂಟೆ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದಿದ್ದಾರೆ.. ಜುವೆಲರಿ ಶಾಪ್‌ಗೆ ನುಗ್ಗಿದ್ದಾರೆ.. ಗನ್‌ ತೋರಿಸಿ ದರೋಡೆಗೆ ಮುಂದಾಗಿದ್ದಾನೆ.. ಆದ್ರೆ ಜುವೆಲರಿ ಮಾಲೀಕ ಆಭರಣಗಳನ್ನು ನೀಡೋದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.. ಈ ವೇಳೆ ಮಾತಿನ ಚಕಮಕಿಯೂ ನಡೆದಿದೆ.. ಇದೇ ವೇಳೆ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದ್ದಾನೆ.. ಇದರಿಂದಾಗಿ ಅಂಗಡಿ ಮಾಲೀಕ ಹಾಗೂ ಮತ್ತೊಬ್ಬರಿಗೆ ಗಾಯಗಳಾಗಿವೆ.

ಒಟ್ಟು ಮೂರು ಸುತ್ತು ಗುಂಡಿನ ದಾಳಿ;

ದುಷ್ಕರ್ಮಿಗಳು ಒಟ್ಟು ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದಾಗಿ ಅಪ್ಪುರಂ ಹಾಗೂ ಆನಂದರಾಮ್‌ ಎಂಬುವವರು ಗಾಯಗೊಂಡಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿ ಜನ ಸೇರುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ..

ಬಂದಿದ್ದು ಸುಪಾರಿ ಹಂತಕರಾ..?;

ಮೂವರು ದುಷ್ಕರ್ಮಿಗಳಿಂದ ಈ ಕೃತ್ಯ ಎಸಗಲಾಗಿದೆ. ಬಂದು ಬಂದವರೇ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.. ಮೂರು ಸುತ್ತು ಗುಂಡು ಹಾರಿಸಿದರೂ ಸರಿಯಾಗಿ ಹಾರಿಸದ ಕಾರಣ, ಇಬ್ಬರೂ ಬಚಾವಾಗಿದ್ದಾರೆ.. ಗುಂಡು ತಗುಲಿ ಗಾಯವಾಗಿದ್ದರೂ, ಮಾಲೀಕ ಹಾಗೂ ಸಿಬ್ಬಂದಿ ಔಟ್‌ ಆಫ್‌ ಡೇಂಜರ್‌ ಎಂದು ಹೇಳಲಾಗುತ್ತಿದೆ. ಇನ್ನು ದುಷ್ಕರ್ಮಿಗಳು ಆತುರದಲ್ಲಿ ಒಂದು ಪಿಸ್ತೂಲ್‌ ಅನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಆ ಭಾಗದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

 

Share Post