CrimeDistricts

ಸಿ.ಪಿ.ಯೋಗೇಶ್ವರ್‌ ಭಾವನ ಕೊಲೆ ಪ್ರಕರಣ; ಭೂವ್ಯಾಜ್ಯಗಳೇ ಇದಕ್ಕೆ ಕಾರಣವಾ..?

ಚಾಮರಾಜನಗರ; ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರ ಭಾವ ಮಹದೇವಯ್ಯ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಕಿಡ್ನ್ಯಾಪ್‌ ಆಗಿದ್ದ ಮಹದೇವಯ್ಯ ಅವರನ್ನು ಚಾಮರಾನಗರ ಜಿಲ್ಲೆ ಹನೂರು ತಾಲ್ಲೂಕಿನ ರಾಮಾಪುರ ಗ್ರಾಮದ ಬಲಿ ಕೊಲೆ ಮಾಡಲಾಗಿತ್ತು. ಇದೀಗ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಮಹಾದೇವಯ್ಯ ಅವರು ಭೂವ್ಯಾಜ್ಯಗಳನ್ನು ನಿರ್ವಹಿಸುತ್ತಿದ್ದರು. ಈ ಕಾರಣಕ್ಕಾಗಿಯೇ ವೈಮನಸ್ಯ ಉಂಟಾಗಿ ಈ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಮಹದೇವಯ್ಯ ಅವರ ಮನೆಯಲ್ಲಿ ಯಾವುದೇ ದರೋಡೆ ನಡೆದಿಲ್ಲ ಎಂದು ರಾಮನಗರ ಎಸ್‌ಪಿ ಕಾರ್ತಿಕ್‌ ರೆಡ್ಡಿ ಹೇಳಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ. ಅಲ್ಲಿಯವರೆಗೆ ಯಾವುದೇ ಮಾಹಿತಿ ನೀಡೋದಕ್ಕೆ ಆಗೋದಿಲ್ಲ ಎಂದು ಕಾರ್ತೀಕ್‌ ರೆಡ್ಡಿ ಹೇಳಿದ್ದಾರೆ.

ಮಹದೇವಯ್ಯ ಮೃತದೇಹವನ್ನು ಬೆಂಗಳೂರಿನ ಆರ್​ಆರ್​ ನಗರದ ಶವಗಾರಕ್ಕೆ ತರಲಾಗಿದ್ದು,  ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

 

Share Post