CrimeDistricts

ಟಿ ನರಸೀಪುರದ ಬಳಿ ದರ್ಶನ್‌ ಅಭಿಮಾನಿ ದಾರುಣ ಸಾವು!

ಮೈಸೂರು; ರಸ್ತೆ ಅಪಘಾತವೊಂದರಲ್ಲಿ ನಟ ದರ್ಶನ್‌ ಅಭಿಮಾನಿ ದಾರುಣವಾಗಿ ಸಾವನ್ನಪ್ಪಿದ್ದಾರೆ.. ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ.. ದರ್ಶನ್‌ ಅಭಿಮಾನಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಪಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ.. 

ಟಿ ನರಸೀಪುರ ಪಟ್ಟಣದ ವಿನಾಯಕ ಕಾಲೋನಿಯಲ್ಲಿ ವಾಸವಿದ್ದ ದರ್ಶನ್‌ ಅಭಿಮಾನಿ ರವಿ ಸಾವನ್ನಪ್ಪಿದ್ದಾರೆ.. ಮೃತ ಧರಿಸಿದ್ದ ಟಿ ಶರ್ಟ್‌ ಮೇಲೆ ದರ್ಶನ್‌ ಅವರ ಫೋಟೋ ಇರುವುದು ಕಂಡುಬಂದಿದೆ.. ಬನ್ನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ..

ಮೃತದೇಹವನ್ನು ಟಿ. ನರಸೀಪುರ ಸಾರ್ವಜನಿಕರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.. ವಿಷಯ ತಿಳಿದು ಮೃತ ಸಂಬಂಧಿಕರು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ..

Share Post