CrimeDistricts

ನಿರಂತರ ಮಳೆಯಿಂದ ಕುಸಿದ ಮನೆ; ಒಂದೇ ಕುಟುಂಬದ ನಾಲ್ವರ ದುರ್ಮರಣ!

ಮಂಗಳೂರು; ಭಾರಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ದುರಂತ ನಡೆದಿದೆ. ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಉಲ್ಲಾಳ ತಾಲ್ಲೂಕಿನ ಕುತ್ತಾರು ಮದನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

  ಮನೆಯ ಯಜಮಾನ ಯಸಿರ್, ಪತ್ನಿ ಮರೀಯಂ, ಮಕ್ಕಳು ರಿಯಾನಾ, ರೀಫನಾ ಸಾವನ್ನಪ್ಪಿದ ದುರ್ದೈವಿಗಳು. ಇದು ಅಬೂಬಕರ್ ಎಂಬುವವರ ಮನೆ ಎಂದು ತಿಳಿದುಬಂದಿದೆ. ಕಳೆದ ಕೆಲಸ ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಗೋಡೆಗಳು ನೆನೆದು ಈ ಘಟನೆ ನಡೆದಿದೆ..

  ಕಳೆದ ರಾತ್ರಿ ಮನೆಯಲ್ಲಿ ಎಲ್ಲರೂ ಊಟ ಮಾಡಿ ನಿದ್ದೆಗೆ ಜರಿದ್ದರು. ಈ ವೇಳೆ ಮನೆ ಕುಸಿದಿದ್ದು, ನಿದ್ದೆಯಲ್ಲೇ ಎಲ್ಲರೂ ಸಾವಿಗೀಡಾಗಿದ್ದಾರೆ.

Share Post