CinemaCrime

ಟೆನ್ಷನ್‌ ತಾಳದೆ ಸಿಗರೇಟ್‌ ಕೇಳಿದ ದರ್ಶನ್‌; ಕೊಡಲ್ಲ ಎಂದ್ರಂತೆ ಪೊಲೀಸರು!

ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬಂಧಿತರಾಗಿರುವ ನಟ ದರ್ಶನ್‌ ಪೊಲೀಸ್‌ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.. ಈ ವೇಳೆ ಅವರು ಟೆನ್ಷನ್‌ ಆಗ್ತಿದೆ.. ಸಿಗರೇಟ್‌ ಕೊಡಿ ಎಂದು ಪೊಲೀಸರಿಗೆ ಕೇಳಿದ್ದಾರೆ.. ಆದ್ರೆ ಯಾವುದೇ ಕಾರಣಕ್ಕೂ ಸಿಗರೇಟ್‌ ಕೊಡೋದಿಲ್ಲ ಎಂದು ಖಡಕ್‌ ಆಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ..

ನಿನ್ನೆ ಬೆಳಗ್ಗೆ ದರ್ಶನ್‌ ಅವರನ್ನು ಮೈಸೂರಿನಲ್ಲಿ ಬಂಧಿಸಿ ಕರೆತರಲಾಗಿದ್ದು, ಕೋರ್ಟ್‌ ದರ್ಶನ್‌ ಸೇರಿ 13 ಮಂದಿಯನ್ನು 6 ದಿನ ಪೊಲೀಸ್‌ ಕಸ್ಟಡಿಗೆ ಕೊಟ್ಟಿದೆ.. ಹೀಗಾಗಿ ಕಳೆದ ರಾತ್ರಿಯಿಂದ ದರ್ಶನ್‌ ಹಾಗೂ ಸಹಚರರು ಪೊಲೀಸ್‌ ಠಾಣೆಯಲ್ಲೇ ಇದ್ದಾರೆ.. ನಿನ್ನೆಯಿಂದಲೂ ದರ್ಶನ್‌ ಊಟ ಕೂಡಾ ಮಾಡಿಲ್ಲ.. ಬದಲಾಗಿ ಜ್ಯೂಸ್‌ ಹಾಗೂ ಮಜ್ಜಿಗೆ ಮಾತ್ರ ಕುಡಿದಿದ್ದಾರೆ ಎಂದು ತಿಳಿದುಬಂದಿದೆ..

ನಿನ್ನೆ ಬೆಳಗ್ಗೆ ಇಡ್ಲಿ ತಿಂದಿದ್ದ ದರ್ಶನ್‌ ನಿನ್ನೆ ಮಧ್ಯಾಹ್ನದಿಂದ ಏನನ್ನೂ ತಿಂದಿಲ್ಲ.. ಮಜ್ಜಿಗೆ ಕುಡಿದಿದ್ದ ದರ್ಶನ್‌ ಬೆಳಗ್ಗೆ ಕೂಡಾ ತಿಂಡಿ ಬೇಡ ಎಂದಿದ್ದಾರೆ.. ಬದಲಾಗಿ ಅವರು ಸಿಗರೇಟ್‌ ಕೇಳಿದ್ದಾರೆ ಎನ್ನಲಾಗಿದೆ.. ಆದ್ರೆ ಪೊಲೀಸರು ಠಾಣೆಯಲ್ಲಿ ಇದಕ್ಕೆಲ್ಲಾ ಅವಕಾಶ ಕೊಡೋದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ..

 

Share Post