CrimeNational

300 ಕೋಟಿ ರೂಪಾಯಿ ಆಸ್ತಿ ಕಬಳಿಸಲು ಸಂಚು!; ಸುಪಾರಿ ಕೊಟ್ಟು ಮಾವನ ಕೊಲೆ ಮಾಡಿಸಿದ ಸೊಸೆ!

ನಾಗ್ಪುರ; ಮಾವನಿಗೆ ಸೇರಿದ 300 ಕೋಟಿ ರೂಪಾಯಿ ಆಸ್ತಿ ಒಡೆಯಲು ಸೊಸೆ ಸಂಚು ರೂಪಿಸಿದ್ದು, ಮಾವನ ಕೊಲೆ ಮಾಡಲು ಸೊಸೆಯೇ ಸುಪಾರಿ ಕೊಟ್ಟಿರುವ ಘಟನೆ ನಡೆದಿದೆ.. ಮಹಾರಾಷ್ಟ್ರದಲ್ಲಿ ನಾಗ್ಪುರದಲ್ಲಿ ಈ ಘಟನೆ ನಡೆದಿದ್ದು, ಸೊಸೆಯೇ ಒಂದು ಕೋಟಿ ರೂಪಾಯಿ ಕೊಟ್ಟು ಮಾವನನ್ನು ಕೊಲೆ ಮಾಡಿಸಿದ್ದಾಳೆ..

ಪುರುಷೋತ್ತಮ್ ಪುಟ್ಟೇವಾರ್ (82 ವರ್ಷ) ಎಂಬುವವರೇ ಕೊಲೆಯಾದವರು.. ಮೇ22ರಂದು ನಾಗ್ಪುರದ ಬಾಲಾಜಿ ನಗರದಲ್ಲಿ ಅಪಘಾತವೊಂದು ನಡೆದಿತ್ತು.. ಕಾರೊಂದು ಡಿಕ್ಕಿ ಹೊಡೆದಿದ್ದರಿಂದಾಗಿ ಪರುಷೋತ್ತಮ್‌ ಅವರು ಸಾವನ್ನಪ್ಪಿದ್ದರು.. ಆರಂಭದಲ್ಲಿ ಇದು ಅಪಘಾತ ಎಂದೇ ಪೊಲೀಸರು ಭಾವಿಸಿ, ಚಾಲಕನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.. ಆದ್ರೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದಾಗ ಅದೊಂದು ಕೊಲೆ ಅನ್ನೋ ಅನುಮಾನ ಮೂಡಿದೆ.. ಆ ವಿಚಾರಣೆ ಕೈಗೆತ್ತಿಕೊಂಡಾಗ 300 ಕೋಟಿ ರೂಪಾಯಿ ಆಸ್ತಿ ಹೊಡೆಯುವುದಕ್ಕಾಗಿ ಸೊಸೆಯೇ ಸುಪಾರಿ ಕೊಟ್ಟಿದ್ದಳು ಅನ್ನೋದು ಬಯಲಾಗಿದೆ..

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 6 ರಂದು ಆರೋಪಿ ಅರ್ಚನಾ ಮನೀಶ್ ಪುಟ್ಟೇವಾರ್(53) ಹಾಗೂ ಆಕೆಯ ಸಹಚರರಾದ ಸಾರ್ಥಕ್ ಬಾಗ್ಡೆ ಮತ್ತು ಧರ್ಮಿಕ್ ಎಂಬುವವರನ್ನು ಅರೆಸ್ಟ್‌ ಮಾಡಲಾಗಿದೆ.. ಈ ಕೊಲೆ ಮಾಡಲು ಧರ್ಮಿಕ್  ಎಂಬಾತನಿಗೆ ಅರ್ಚನಾ 40 ಸಾವಿರ ರೂಪಾಯಿ ಕೊಟ್ಟಿದ್ದಳು. ಜೊತೆ ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಲು 1.20 ಲಕ್ಷ ರೂಪಾಯಿ ನೀಡಿದ್ದಳು ಎಂದು ತಿಳಿದುಬಂದಿದೆ.. ಜೊತೆಗೆ ಅಡ್ವಾನ್ಸ್‌ ರೂಪದಲ್ಲಿ 3 ಲಕ್ಷ ರೂಪಾಯಿ ಹಣ ಹಾಗೂ ಸ್ವಲ್ಪ ಚಿನ್ನಾಭರಣ ಕೂಡಾ ನೀಡಲಾಗಿತ್ತು ಎಂದು ತನಿಖೆ ವೇಳೆ ಗೊತ್ತಾಗಿದೆ..

ಆರೋಪಿ ಅರ್ಚನಾ ಗಡ್ಚಿರೋಲಿ ಮತ್ತು ಚಂದಾಪುರದಲ್ಲಿ ನಗರ ಯೋಜನೆ ಸಹಾಯಕ ನಿರ್ದೇಶಕಿಯಾಗಿದ್ದರು ಎಂದು ತಿಳಿದುಬಂದಿದೆ..

 

Share Post