CinemaCrime

ರೇಣುಕಾಸ್ವಾಮಿ ಕೊಲೆ ಪ್ರಕರಣ; ವಶಪಡಿಸಿಕೊಂಡ ಕಾರಿನಲ್ಲಿ ವ್ಯಾನಿಟಿ ಬ್ಯಾಗ್‌ ಪತ್ತೆ!

ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಪೊಲೀಸರು ಎರಡು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.. ವಶಪಡಿಸಿಕೊಂಡ ಒಂದು ಕಾರಿನಲ್ಲಿ ಮದ್ಯದ ಬಾಟಲಿ ಹಾಗೂ ಒಂದು ವ್ಯಾನಿಟಿ ಬ್ಯಾಗ್‌ ಸಿಕ್ಕಿದೆ ಎಂದು ತಿಳಿದುಬಂದಿದೆ.. ಆ ಬ್ಯಾಗ್‌ ಪವಿತ್ರಾಗೌಡ ಅವರದ್ದೇ ಎಂದು ತಿಳಿದುಬಂದಿದೆ..

ರೇಣುಕಾಸ್ವಾಮಿಯನ್ನು ರಾಜರಾಜೇಶ್ವರಿ ನಗರದ ಶೆಡ್‌ನಲ್ಲಿ ಕೊಲೆ ಮಾಡಲಾಗಿತ್ತು.. ಅನಂತರ ಮೃತದೇಹವನ್ನು ಸುಮನಹಳ್ಳಿ ಬಳಿ ಎಸೆದು ಹೋಗಲಾಗಿತ್ತು.. ವಶಪಡಿಸಿಕೊಂಡ ಎರಡು ಕಾರುಗಳಲ್ಲಿ ಒಂದನ್ನು ಶವ ಸಾಗಿಸಲು ಬಳಸಲಾಗಿದೆ ಎಂದು ತಿಳಿದುಬಂದಿದೆ.. ಇನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ಕೊಲೆ ನಡೆದ ದಿನ ಶೆಡ್‌ಗೆ ಮಹೀಂದ್ರಾ ಸ್ಕಾರ್ಪಿಯೋ ಹಾಗೂ ಜೀಪ್ ಕಂಪನಿಯ ರಾಂಗ್ಲರ್ ರುಬಿಕಾನ್​ ಕಾರು ಬಂದಿರುವುದು ಗೊತ್ತಾಗಿದೆ.. ಈ ಎರಡೂ ಕಾರುಗಳನ್ನು ನಟ ದರ್ಶನ್‌ ಬಳಸುತ್ತಿದ್ದರು ಎಂದು ತಿಳಿದುಬಂದಿದೆ..

ದರ್ಶನ್‌ ಅವರು ಬೆಂಗಳೂರಿನಲ್ಲಿ ಓಡಾಡಲು ಇದೇ ಜೀಪ್‌ ಬಳಸುತ್ತಿದ್ದರು ಎಂದು ಗೊತ್ತಾಗಿದೆ.. ಕೊಲೆಯಾದ ರಾತ್ರಿ ಇದೇ ಕಾರಿನಲ್ಲಿ ದರ್ಶನ್‌ ಅವರು ರಾಜರಾಜೇಶ್ವರಿ ನಗರದ ಶೆಡ್​ಗೆ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ.. ಮೂಲಗಳ ಪ್ರಕಾರ ಸ್ಕಾರ್ಪಿಯೋ ಕಾರಿನಲ್ಲಿ ಆರೋಪಿಗಳು ರೇಣುಕಾ ಸ್ವಾಮಿಯ ಶವವನ್ನು ಕೊಂಡೊಯ್ದು ಸುಮನಹಳ್ಳಿ ಮೋರಿಗೆ ಎಸದಿದ್ದರು ಎಂದು ಹೇಳಲಾಗುತ್ತಿದೆ.. ಜೀಪ್‌ ಆರೋಪಿ ವಿನಯ್‌ ಹೆಸರಿನಲ್ಲಿ ನೋಂದಣಿಯಾಗಿದ್ದರೆ, ಕಾರು ಪ್ರದೋಶ್‌ ಹೆಸರಲ್ಲಿ ರಿಜಿಸ್ಟರ್‌ ಆಗಿದೆ ಎಂದು ತಿಳಿದುಬಂದಿದೆ.. ಈ ಇಬ್ಬರೂ ಕೂಡಾ ಪೊಲೀಸ್‌ ಬಂಧನದಲ್ಲಿದ್ದಾರೆ..

 

Share Post