CrimeNational

ಆಂಧ್ರದಲ್ಲಿ ಪೇಪರ್‌ ಪ್ಲೇಟ್‌ ಕಾರ್ಖಾನೆಗೆ ಬೆಂಕಿ; ಮೂವರ ದುರ್ಮರಣ

ಅಮರಾವತಿ; ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಕಳೆದ ರಾತ್ರಿ ಭಿಕರ ಅಗ್ನಿ ದುರಂತ ನಡೆದಿದೆ. ಪೇಪರ್​​​ ಪ್ಲೇಟ್​ ತಯಾರಿಸುವ ಕಾರ್ಖಾನೆಗೆ ಬೆಂಕಿ ಬಿದ್ದಿದ್ದು, ಮೂವರು ಸಾವನ್ನಪ್ಪಿದ್ದಾರೆ. ವಿದ್ಯುತ್‌ ಶಾಟ್​​​​​ಸರ್ಕ್ಯೂಟ್​ನಿಂದ ಈ ಅವಘಡ ನಡೆದಿದೆ ಎಂದು ತಿಳಿದುಬಂದಿದೆ.

ಮೃತರನ್ನು ಕಾರ್ಖಾನೆ ಮಾಲೀಕ ಅಪ್ಪ ಭಾಸ್ಕರ್ (65), ಅವರ ಮಗ ಡೆಲ್ಲಿಬಾಬು (35) ಮತ್ತು ಗೆಳೆಯ ಬಾಲಾಜಿ (25) ಎಂದು ಗುರುತಿಸಲಾಗಿದೆ.  ಚಿತ್ತೂರಿನ ರಂಗಾಚಾರಿ ಬೀದಿಯಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಪೇಪರ್ ಪ್ಲೇಟ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿತ್ತು. ಡೆಲ್ಲಿ ಬಾಬು ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಕಾರಣಕ್ಕಾಗಿಯೇ ಸ್ನೇಹಿತ ಬಾಲಾಜಿ ಅವರ ಮನೆಗೆ ಬಂದಿದ್ದರು ಎಂದು ಹೇಳಲಾಗಿದೆ. ಕಾರ್ಖಾನೆಯ ಮೇಲ್ಬಾಗದಲ್ಲೇ ಮನೆ ಕೂಡಾ ಇದ್ದಿದ್ದರಿಂದ ಅವರು ಬೆಂಕಿಗೆ ಆಹುತಿಯಾಗಿದ್ದಾರೆ.

Share Post