CrimeNational

ಸಂಸದನಿಂದ ಮೋಸ; ಡೆತ್‌ನೋಟ್‌ ಬರೆದಿಟ್ಟು ವೈದ್ಯ ಆತ್ಮಹತ್ಯೆ

ಗಾಂಧಿನಗರ; ಬಿಜೆಪಿ ಸಂಸರೊಬ್ಬರ ಹೆಸರು ಬರೆದಿಟ್ಟು ವೈದ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಜರಾತ್‌ನ ಗಾಂಧಿನಗರ ಬಳಿ ನಡೆದಿದೆ. ವೆರಾವಲ್‌ನಲ್ಲಿ ಆಸ್ಪತ್ರೆ ನಡೆಸುತ್ತಿದ್ದ ವೈದ್ಯ, ಸಂಸದ ರಾಜೇಶ್‌ ಚುಡಾಸಮಾ ಹಾಗೂ ಅವರ ತಂದೆ ನರನ್‌ಗೆ 3 ಕೋಟಿ ರೂಪಾಯಿ ಸಾಲ ನೀಡಿದ್ದರಂತೆ. ಆದ್ರೆ ಅವ್ರು ಅದನ್ನು ವಾಪಸ್‌ ನೀಡಿಲ್ಲ. ಇದ್ರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ವೆರಾವಲ್‌ ಆಸ್ಪತ್ರೆ ಬಳಿಯೇ ವೈದ್ಯನ ಮನೆ ಇದ್ದು, ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಜರಾತಿ ಭಾಷೆಯಲ್ಲಿ ಬರೆದ ಒಂದೇ ಸಾಲಿನ ಸೂಸೈಡ್ ನೋಟ್ ಸಿಕ್ಕಿದೆ. ಅದರಲ್ಲಿ ತನ್ನ ಸಾವಿಗೆ ರಾಜೇಶ್ ಮತ್ತು ನರನ್ ಕಾರಣ ಎಂದು ಬರೆಯಲಾಗಿದೆ.

Share Post