Crime

ಎರಡು ದಿನದಲ್ಲಿ ಮದುವೆ ಇಟ್ಟುಕೊಂಡು ದರೋಡೆಗೆ ಯತ್ನ; ಸಿಕ್ಕಿಬಿದ್ದ ವರ

ಹುಬ್ಬಳ್ಳಿ: ಎರಡು ದಿನದಲ್ಲಿ ಮದುವೆ ಇಟ್ಟುಕೊಂಡು ವ್ಯಕ್ತಿಯೊಬ್ಬ ಬ್ಯಾಂಕ್‌ನಲ್ಲಿ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಇಲ್ಲಿನ ಕೊಪ್ಪಿಕರ್‌ ರಸ್ತೆಯಲ್ಲಿ ಎಸ್‌ಬಿಐ ಬ್ಯಾಂಕಿಗೆ ಬಂದ ಯುವಕನೊಬ್ಬ ಕ್ಯಾಷಿಯರ್‌ಗೆ ಚಾಕು ತೋರಿಸಿ ಬೆದರಿಸಿದ್ದಾನೆ. ಕ್ಯಾಶ್‌ ಕೌಂಟರ್‌ನಲ್ಲಿದ್ದ ಹಣವನ್ನು ಪಡೆದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಆತ ಕೆಲವೇ ಕ್ಷಣದಲ್ಲಿ ಸಿಕ್ಕಿಬಿದ್ದಿದ್ದಾರೆ.

   ಆರೋಪಿಯನ್ನು ವಿಜಯಪುರ ಮೂಲದ ಪ್ರವೀಣಕುಮಾರ್‌ ಅಪ್ಪಾಸಾಹೇಬ್‌ ಪಾಟೀಲ್‌ ಎಂದು ಗುರುತಿಸಲಾಗಿದೆ. ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಈತನ ಮದುವೆ ನಿಶ್ವಯವಾಗಿತ್ತು. ಇನ್ನೆರಡು ದಿನದಲ್ಲಿ ಆತನ ಮದುವೆ ಇತ್ತು. ಆತ ಮದುವೆಗಾಗಿ ರಜೆ ಪಡೆದು ಹುಬ್ಬಳ್ಳಿಗೆ ಬಂದಿದ್ದ. ಎರಡು ದಿನದ ಹಿಂದೆಯೇ ಹುಬ್ಬಳ್ಳಿ ಲಾಡ್ಜ್‌ ಒಂದರಲ್ಲಿ ತಂಗಿದ್ದ ಎಂದು ಗೊತ್ತಾಗಿದೆ. ಇಂದು ಇದ್ದಕ್ಕಿದ್ದಂತೆ ಬ್ಯಾಂಕ್‌ ಶಾಖೆಗೆ ಬಂದವನೇ ಸಿಬ್ಬಂದಿಯನ್ನು ಚಾಕುವಿನಿಂದ ಬೆದರಿಸಿ ಏಳು ಲಕ್ಷ ರೂಪಾಯಿ ದೋಚಿದ್ದ. ಈ ವೇಳೆ ಬ್ಯಾಂಕ್‌ ಬಳಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್‌ ಪೇದೆಯೊಬ್ಬರು ಆರೋಪಿಯನ್ನು ಹಿಡಿದಿದ್ದಾರೆ.

Share Post