CrimeDistricts

1500 ರೂಪಾಯಿ ಸಾಲ ಹಿಂತಿರುಗಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ಚಿಕ್ಕಮಗಳೂರು; ಬರೀ 150o ಸಾಲ ಮಾಡಿಕೊಂಡಿದ್ದ ವಿದ್ಯಾರ್ಥಿ ಅದನ್ನು ವಾಪಸ್‌ ನೀಡಲಾಗದೇ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಕೊಪ್ಪ ಪಟ್ಟಣದ ಬಿಜಿಎಸ್‌ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. 

ಅಜ್ಜಂಪುರ ತಾಲ್ಲೂಕಿನ ಹಿರೇಬಳ್ಳೇಕೆರೆ ಗ್ರಾಮದ ಶ್ರೀನಿವಾಸ್‌ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಒಂಬತ್ತನೇ ತರಗತಿ ಓದುತ್ತಿದ್ದ ಶ್ರೀನಿವಾಸ್‌, ಸ್ಮಾರ್ಟ್‌ ವಾಚ್‌ ಖರೀದಿ ಮಾಡೋದಕ್ಕಾಗಿ ಹಾಸ್ಟೆಲ್‌ ವಾರ್ಡನ್‌ ಬಳಿಯಿಂದ 2000 ಸಾವಿರ ರೂಪಾಯಿ ಕದ್ದಿದ್ದ. ನಂತರ ಸಿಕ್ಕಿಬಿದ್ದಿದ್ದ ಶ್ರೀನಿವಾಸ್‌, ಸ್ನೇಹಿತರ ಬಳಿಯಿಂದ 1500 ರೂಪಾಯಿ ಸಾಲ ಮಾಡಿ ವಾರ್ಡನ್‌ ಗೆ ದುಡ್ಡು ಕೊಟ್ಟಿದ್ದ. ಆದ್ರೆ ಸ್ನೇಹಿತರಿಗೆ ಹಣ ವಾಪಸ್‌ ನೀಡಲು ಆಗಿಲ್ಲ. ಇದರಿಂದ ಮನನೊಂದು ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆಗಸ್ಟ್‌ 22ರಂದೇ ಶ್ರೀನಿವಾಸ್‌ ನೇಣಿಗೆ ಶರಣಾಗಿದ್ದ. ಇದಕ್ಕೆ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದರು. ಒಂದು ವಾರದಿಂದ ವಿಚಾರಣೆ ನಡೆಸಿದ ನಂತರ ಘಟನೆ ಕಾರಣ ಗೊತ್ತಾಗಿದೆ. ವಿದ್ಯಾರ್ಥಿ ಬರೆದಿಟ್ಟಿದ್ದ ಡೆತ್‌ನೋಟ್‌ ಕೂಡಾ ಈಗ ವೈರಲ್‌ ಆಗುತ್ತಿದೆ.

 

Share Post