CrimeNational

ಮೆರವಣಿಗೆ ವೇಳೆ ವರನ ಮೇಲೆ ಆಸಿಡ್‌ ಅಟ್ಯಾಕ್‌; ಪ್ರಿಯತಮೆಯನ್ನು ಥಳಿಸಿದ ಜನ!

ಲಖನೌ; ತನ್ನನ್ನು ಬೇಡ ಎಂದು ಬೇರೆಯವಳನ್ನು ಮದುವೆಯಾಗುತ್ತಿದ್ದ ಪ್ರಿಯತಮನ ಮೇಲೆ ಪ್ರಿಯತಮೆ ಆಸಿಡ್‌ ದಾಳಿ ನಡೆಸಿದ್ದಾಳೆ.. ಈ ವೇಳೆ ವರನಿಗೆ ತೀವ್ರ ಸುಟ್ಟು ಗಾಯಗಳಾಗಿವೆ.. ಅಕ್ಕಪಕ್ಕ ಇದ್ದ ಇಬ್ಬರು ಮಹಿಳೆಯರಿಗೂ ತೀವ್ರ ಗಾಯಗಳಾಗಿವೆ.. ಘಟನೆಯಿಂದಾಗಿ ಕೆರಳಿದ ವರನ ಸಂಬಂಧಿಕರು ಆಸಿಡ್‌ ಎರಚಿದ ಪ್ರಿಯತಮೆಯನ್ನು ಥಳಿಸಿ, ಮೆರವಣಿಗೆ ಮಾಡಿದ್ದಾರೆ..

ವಧುವಿನಂತೆ ಸಿಂಗರಿಸಿಕೊಂಡು ಬಂದಿದ್ದ ಪ್ರಿಯತಮೆ;

ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಈ ಘಟನೆ ನಡೆದಿದೆ.. ತನ್ನ ಪ್ರಿಯತಮನಿಗೆ ಬೇರೊಬ್ಬಳೊಂದಿಗೆ ಮದುವೆಯಾಗುತ್ತಿದೆ ಎಂದು ತಿಳಿದು ಪ್ರಿಯತಮೆ ಅಲ್ಲಿಗೆ ಬಂದಿದ್ದಳು.. ವಧುವಿನಂತೆ ಸಿಂಗಾರ ಮಾಡಿಕೊಂಡು ಬಂದಿದ್ದ ಆಕೆ, ದುಮರಿ ಗ್ರಾಮದಲ್ಲಿ ಪ್ರಿಯತಮ ರಾಕೇಶ್‌ ಬಿಂದ್‌ ಎಂಬಾತ ಮದುವೆ ಮೆರವಣಿಗೆ ಬಳಿ ಬಂದಿದ್ದಾಳೆ.. ತನ್ನನ್ನೇ ಮದುವೆಯಾಗುವಂತೆ ಆಗ್ರಹಿಸಿದ್ದಾಳೆ.. ಆದ್ರೆ ರಾಕೇಶ್‌ ಬಿಂದ್‌ ಮಾತ್ರ ನೀನು ನನಗೆ ಸ್ನೇಹಿತೆಯಷ್ಟೇ.. ನಾನು ನಿನ್ನನ್ನು ಮದುವೆಯಾಗಲ್ಲ ಎಂದುಬಿಟ್ಟಿದ್ದಾನೆ.. ಇದರಿಂದ ರೊಚ್ಚಿಗೆದ್ದ ಆಕೆ, ಮೊದಲೇ ತಂದಿದ್ದ ಆಸಿಡ್‌ ಎರಚಿ ದಾಳಿ ಮಾಡಿದ್ದಾಳೆ.. ಇದರಿಂದಾಗಿ ವರ ಸೇರಿ ಮೂವರಿಗೆ ಗಾಯಗಳಾಗಿವೆ..

ಪ್ರಿಯತಮೆಗೆ ಥಳಿಸಿ, ಮೆರವಣಿಗೆ ಮಾಡಿದ ಜನ;

ಘಟನೆ ನಂತರ ಪ್ರಿಯತಮೆಯನ್ನು ಹಿಡಿದ ಜನ ಚೆನ್ನಾಗಿ ಥಳಿಸಿದ್ದಾರೆ.. ಅನಂತರ ಊರಿನಲ್ಲಿ ಮೆರವಣಿಗೆ ಮಾಡಿದ್ದಾರೆ.. ಈ ದೃಶ್ಯಗಳು ಈಗ ಎಲ್ಲೆಡೆ ಹರಿದಾಡುತ್ತಿವೆ.. ಇದೀಗ ಪ್ರಿಯತಮೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.. ಇನ್ನು ವರ ಚಿಕಿತ್ಸೆ ಪಡೆದು ಬಂದು ನಿಶ್ಚಯಗೊಂಡಿದ್ದ ಯುವತಿ ಜೊತೆ ಮದುವೆಯಾಗಿದ್ದಾನೆ..

Share Post