CrimeDistricts

ಕಾಂಗ್ರೆಸ್‌ ಶಾಸಕರ ಕಾರು ಅಪಘಾತ; ಟೈರ್‌ ಬ್ಲಾಸ್ಟ್‌ ಆಗಿ ದುರ್ಘಟನೆ!

ಚಾಮರಾಜನಗರ; ಕೊಳ್ಳೆಗಾಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.. ಮೈಸೂರಿನ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದವರೆಲ್ಲಾ ಪಾರಾಗಿದ್ದಾರೆ.. ಶಾಸಕ ಕೃಷ್ಣಮೂರ್ತಿಯವರು ಚಾಮರಾಜನಗರದಿಂದ ಮೈಸೂರಿನ ಮನೆಗೆ ಹೋಗುತ್ತಿದ್ದರು.. ಈ ವೇಳೆ ಈ ದುರ್ಘಟನೆ ನಡೆದಿದೆ..

ಮೈಸೂರು ಹೊರವಲಯದ ನಾಡನಹಳ್ಳಿ ಬಳಿ ಕಾರು ಬಂದಾಗ ಟೈರ್‌ ಒಂದು ಬ್ಲಾಸ್ಟ್‌ ಆಗಿದೆ.. ಇದರಿಂದಾಗಿ ಕಾರು ರಸ್ತೆಯಿಂದ ಪಕ್ಕಕ್ಕೆ ಇಳಿದಿದೆ.. ಚಾಲಕನ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ.. ಶಾಸಕರು ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ..

ಲಾರಿ-ಪಿಕಪ್‌ ವಾಹನ ಡಿಕ್ಕಿ;

ಇನ್ನು ತುಮಕೂರು ಜಿಲ್ಲೆ ಶಿರಾ ಬಳಿಯ ಚಿಕ್ಕನಹಳ್ಳಿ ಸಮೀಪ ಲಾರಿಗೆ ಹಿಂದಿನಿಂದ ಬೊಲೆರೋ ಪಿಕಪ್‌ ವಾಹನ ಡಿಕ್ಕಿ ಹೊಡೆದಿದೆ.. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಘಟನೆ ನಡೆದಿದೆ.. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.. ಅವರನ್ನು ಉಮೇಶ್ ನಾಗಪ್ಪ ಹಾಗೂ ಸಂತೋಷ್ ಸುರೇಶ್ ಎಂದು ಗುರುತಿಸಲಾಗಿದೆ.. ಇಬ್ಬರೂ ಬೆಳಗಾವಿ ಜಿಲ್ಲೆ ಅಥಣಿಯವರು ಎಂದು ತಿಳಿದುಬಂದಿದೆ..

ದ್ರಾಕ್ಷಿ ತುಂಬಿಕೊಂಡು ಬೆಂಗಳೂರಿಗೆ ಬರುತ್ತಿರುವಾಗ ಈ ದುರಂತ ನಡೆದಿದೆ.. ಬೊಲೆರೋ ವಾಹನದ ಚಾಲಕನಿಗೆ ಗಾಯಗಳಾಗಿದ್ದು, ಶಿರಾ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.. ಈ ಬಗ್ಗೆ ಕಳ್ಳಂಬೆಳ್ಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..

 

Share Post