CrimeDistricts

ಮದ್ಯವ್ಯಸನಿ ಮಹಿಳೆಯಿಂದ ಯುವಕನ ಕೊಲೆ

ಬೆಳಗಾವಿ; ಕಂಠಪೂರ್ತಿ ಕುಡಿದಿದ್ದ ಮಹಿಳೆಯೊಬ್ಬರು ಚಾಕುವಿನಿಂದ ಇರಿದು ಯುವಕನೊಬ್ಬನನ್ನು ಕೊಲೆಗೈದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಇಲ್ಲಿನ ಚವ್ಹಾಟ್‌ ಗಲ್ಲಿಯಲ್ಲಿ ನಡೆದಿದೆ.

ತಾರಿಹಾಳ ನಿವಾಸಿಯಾಗಿರುವ ನಾಗರಾಜ್‌ ರಾಗಿಪಾಟೀಲ್‌ ಕೊಲೆಯಾದ ಯುವಕ. ಕಂಗ್ರಾಳಿ ಕೆ.ಹೆಚ್‌. ಗ್ರಾಮದ ಜಯಶ್ರೀ ಪವಾರ್‌ ಎಂಬಾಕೆ ಕೊಲೆ ಮಾಡಿದ ಮಹಿಳೆ.

ನಾಗರಾಜ್‌ ಅವರು ಮಹಾರಾಷ್ಟ್ರದ ಕರಾಡ್‍ನಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅವರು ಸ್ವಗ್ರಾಮ ತಾರಿಹಾಳದಲ್ಲಿ ರಾಮೇಶ್ವರ ದೇವರ ಜಾತ್ರೆಗೆ ಬಂದಿದ್ದ. ಬಟ್ಟೆ ತರಲೆಂದು ಬೆಳಗಾವಿಗೆ ಬಂದಿದ್ದ ನಾಗರಾಜ್‌, ಚಲ್ಹಾಟ್‌ ಗಲ್ಲಿಯಲ್ಲಿ ಸ್ನೇಹಿತರ ಜೊತೆ ನಿಂತಿದ್ದ. ಈ ವೇಳೆ ಕುಡಿದಿದ್ದ ಮಹಿಳೆ ಜಯಶ್ರೀ, ನಾಗರಾಜ್‌ ಬಳಿ ಬಂದು ಮೊಬೈಲ್‌ ಕೇಳಿದ್ದಾಳೆ. ಯಾಕೆ ಕೊಡಬೇಕು ಎಂದು ಪ್ರಶ್ನಿಸಿದ್ದಕ್ಕೆ ಆಕೆ ಚಾಕುವಿನಿಂದ ತಿವಿದಿದ್ದಾಳೆ.

ಕೂಡಲೇ ಸ್ನೇಹಿತರು ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

 

Share Post