CrimeDistrictsPolitics

ಶಾಸಕರೆದುರೇ ಹಾಲಿ-ಮಾಜಿ ಪುರಸಭಾ ಸದಸ್ಯರ ಗುದ್ದಾಟ

ತುಮಕೂರು; ಶಾಸಕರೆದುರೆ ಹಾಲಿ-ಮಾಜಿ ಪುರಸಭಾ ಸದಸ್ಯರ ಕೈ ಕೈ ಮಿಲಾಯಿಕೊಂಡ ಘಟನೆ ಕುಣಿಗಲ್ ನಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ 18 ನೇ ವಾರ್ಡಿನ ಹೌಸಿಂಗ್ ಬೋರ್ಡ್ ನಲ್ಲಿ ಘಟನೆ ನಡೆದಿದೆ. ಜೆಡಿಎಸ್ ನ ಹಾಲಿ ಸದಸ್ಯ ಶ್ರೀನಿವಾಸ್ ಕಾಂಗ್ರೇಸ್ ನ ಮಾಜಿ ಸದಸ್ಯ ಪಾಪಣ್ಣ ನಡುವೆ ಗುದ್ದಾಟ ನಡೆದಿದೆ. ರಸ್ತೆ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಲು ಶಾಸಕ ರಂಗನಾಥ್ ತೆರಳಿದ್ದ ವೇಳೆ ಜೆಡಿಎಸ್ ಸದಸ್ಯ ಶ್ರೀನಿವಾಸ್ ತಾನು ಸಿದ್ದಪಡಿಸಿದ್ದ ಪಟ್ಟಿಯಂತೆ ಕಾಮಗಾರಿ ನಡೆಯುತ್ತಿಲ್ಲ ಎಂದು ವಿರೋದ ವ್ಯಕ್ತ ಪಡಿಸಿದ್ದಾರೆ. ಈ ವೇಳೆ ಇಬ್ಬರು ಹಾಲಿ ಮಾಜಿ ಗಳ ನಡುವೆ ಜಗಳ ಶುರುವಾಗಿ ಕೊನೆಗೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಇಬ್ಬರನ್ನ ಸಮಾಧಾನ ಪಡಿಸಲು ಯತ್ನಿಸಿದ ಶಾಸಕ ರಂಗನಾಥ್ ಮೇಲೂ ಜೆಡಿಎಸ್ ಸದಸ್ಯ ಶ್ರೀನಿವಾಸ್ ರಂಪಾಟ ಮಾಡಿದ್ದಾರೆ ಎನ್ನಲಾಗಿದೆ.

Share Post