CrimeDistricts

ಗರ್ಭಿಣಿ ಮಾಡಿ ಅಬಾರ್ಷನ್‌ ಆರೋಪ!; ಮೋದಿಗೆ ಪತ್ರ ಬರೆದ ಮಹಿಳೆ!

ರಾಮನಗರ; ಗರ್ಬಿಣಿ ಮಾಡಿ ನಂತರ ಬಲವಂತವಾಗಿ ಅಬಾರ್ಷನ್‌ ಮಾಡಿಸಿ ಕೈಕೊಟ್ಟಿದ್ದಾನೆ ಎಂದು ಯುವಕನೊಬ್ಬನ ಮೇಲೆ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ.. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅಂತ ಮಹಿಳೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.. ರಾಮನಗರ ಜಿಲ್ಲೆ ಮಾಗಡಿ ಮೂಲದ ಮಹಿಳೆ ಈ ಆರೋಪ ಮಾಡಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ..

ಇದನ್ನೂ ಓದಿ; ವಿಜಯಪುರದಲ್ಲಿ ನಡುರಸ್ತೆಯಲ್ಲೇ ಯುವತಿಯನ್ನು ಬೆತ್ತಲೆ ಮಾಡಿ ಥಳಿತ; ಮಂಗಳಮುಖಿಯರಿಂದ ವಿಕೃತಿ!

ಮಹಿಳೆ ಐದು ವರ್ಷದ ಹಿಂದೆ ಮದುವೆಯಾಗಿದ್ದು, ಪತಿಯಿಂದ ದೂರವಾಗಿದ್ದರು.. ನಂತರ ಈಕೆ ರಾಮನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಳು.. ಈ ವೇಳೆ ಮಹಿಳೆಗೆ ದಯಾನಂದ್‌ ಎಂಬಾತ ಪರಿಚಯವಾಗಿದ್ದಾನೆ.. ಮದುವೆಯಾಗುತ್ತೇನೆ ಎಂದು ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎನ್ನಲಾಗಿದೆ.. ಈ ಹಿನ್ನೆಲೆಯಲ್ಲಿ ಮಹಿಳೆ ಗರ್ಭಿಣಿಯಾಗಿದ್ದು, ದಯಾನಂದ್‌ ಬಲವಂತವಾಗಿ ಅಬಾರ್ಷನ್‌ ಮಾಡಿಸಿದ್ದಾನೆ ಅಂತ ಮಹಿಳೆ ಆರೋಪ ಮಾಡುತ್ತಿದ್ದಾರೆ.. ಈಗ ದಯಾನಂದ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. ಆತನನ್ನು ಹುಡುಕಿಕೊಡಿ, ಆತನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮಹಿಳೆ ಆಗ್ರಹ ಮಾಡುತ್ತಿದ್ದಾರೆ.

ಇದನ್ನೂ ಓದಿ; ಸಿನಿಮಾದಲ್ಲಿ ಚಾನ್ಸ್‌ ಕೊಡಿಸುತ್ತೇನೆಂದು ಅತ್ಯಾಚಾರಕ್ಕೆ ಯತ್ನಿಸಿದ ಅಸಿಸ್ಟೆಂಟ್‌ ಡೈರೆಕ್ಟರ್‌!

ರಾಮನಗರ ಮಹಿಳಾ ಠಾಣೆಗೆ ಈ ಬಗ್ಗೆ ದೂರು ನೀಡಿದ್ದೇನೆ.. ಇದರ ನಡುವೆ ದಯಾನಂದ್‌ ಗೆಳೆಯನೊಬ್ಬ ನ್ಯಾಯ ಕೊಡಿಸುತ್ತೇನೆ ಎಂದು ನನ್ನ ಬಳಿಯಿಂದ 1.40 ಲಕ್ಷ ರೂಪಾಯಿ ಪಡೆದಿದ್ದಾನೆ.. ಅದನ್ನು ಪೊಲೀಸರಿಗೆ ಲಂಚವಾಗಿ ನೀಡಿದ್ದೇನೆ ಎಂದು ಹೇಳುತ್ತಿದ್ದಾನೆ.. ಆದ್ರೆ ನಾಲ್ಕು ತಿಂಗಳಾದರೂ ನನಗೆ ನ್ಯಾಯ ಸಿಕ್ಕಿಲ್ಲ.. ಹೀಗಾಗಿ, ಮೋದಿಯವರೇ ಈ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದ್ದಾಳೆ.. ನ್ಯಾಯ ಸಿಗದಿದ್ದರೆ ಎಸ್ಪಿ ಕಚೇರಿ ಬಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಎಚ್ಚರಿಕೆ ನೀಡಿದ್ದಾರೆ..

Share Post