CrimeNational

ವಿಜಯಪುರದಲ್ಲಿ ನಡುರಸ್ತೆಯಲ್ಲೇ ಯುವತಿಯನ್ನು ಬೆತ್ತಲೆ ಮಾಡಿ ಥಳಿತ; ಮಂಗಳಮುಖಿಯರಿಂದ ವಿಕೃತಿ!

ವಿಜಯಪುರ; ವಿಜಯಪುರದಲ್ಲಿ ಮಂಗಳಮುಖಿಯರು ವಿಕೃತಿ ಮೆರೆದಿದ್ದಾರೆ.. ಯುವತಿಯೊಬ್ಬಳನ್ನು ನಡುರಸ್ತೆಯಲ್ಲಿ ಬೆತ್ತಲೆ ಮಾಡಿ ಹಿಗ್ಗಾಮುಗ್ಗಾ ಥಳಿಸಲಾಗಿದೆ.. ಜನರು ಕೂಡಾ ಇದನ್ನು ನೋಡುತ್ತಾ ನಿಂತಿದ್ದರು ಅನ್ನೋದು ಸಮಾಜವೇ ತಲೆತಗ್ಗಿಸುವಂತಹ ವಿಚಾರ.. ಯುವತಿಯನ್ನು ಓಡಿಸಿಕೊಂಡು ಬಂದಿರುವ ಮಂಗಳಮುಖಿಯರು ವಿಜಯಪುರದ ಲಲಿತ್‌ಮಹಲ್‌, ಮಿಶ್ರಾಪೇಡಾ ಮುಂಭಾಗದಲ್ಲಿ ನಡುರಸ್ತೆಯಲ್ಲೇ ವಿವಸ್ತ್ರಗೊಳಿಸಿದ್ದಾರೆ.. ಮನಬಂದಂತೆ ಥಳಿಸುತ್ತಿದ್ದರೂ ಜನ ನೋಡುತ್ತಾ ನಿಂತಿದ್ದರಾದರೂ ಯಾರೊಬ್ಬರೂ ನೆರವಿಗೆ ಬಂದಿಲ್ಲ..

ಇದನ್ನೂ ಓದಿ; ಸಿನಿಮಾದಲ್ಲಿ ಚಾನ್ಸ್‌ ಕೊಡಿಸುತ್ತೇನೆಂದು ಅತ್ಯಾಚಾರಕ್ಕೆ ಯತ್ನಿಸಿದ ಅಸಿಸ್ಟೆಂಟ್‌ ಡೈರೆಕ್ಟರ್‌!

ವಿಜಯಪುರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಪ್ಯಾಂಟ್‌, ಶರ್ಟ್‌ ಧರಿಸಿದ್ದ ಯುವತಿ ಭಿಕ್ಷೆ ಬೇಡುತ್ತಿದ್ದಳು.. ನೋಡೋದಕ್ಕೆ ಮಂಗಳಮುಖಿ ತರಾ ಕಾಣುತ್ತಿದ್ದ ಆಕೆಯನ್ನು ವಿಜಯಪುರದ ಮಂಗಳಮುಖಿಯರ ಗುಂಪು ಮಂಗಳಮುಖಿ ಎಂದೇ ಭಾವಿಸಿದ್ದಾರೆ.. ಎಲ್ಲಿಂದಲೋ ಬಂದು ಇಲ್ಲಿ ಭಿಕ್ಷೆ ಬೇಡುತ್ತಿದ್ದಾಳೆ ಎಂದು ಭಾವಿಸಿ, ಆಕೆಯನ್ನು ಅಟ್ಟಾಡಿಸಿದ್ದಾರೆ.. ನಡು ರಸ್ತೆಯಲ್ಲೇ ಬೆತ್ತಲೇ ಮಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.. ಮರ್ಮಾಂಗಕ್ಕೆ ಖಾರದಪುಡಿ ಹಾಕಿ ವಿಕೃತಿ ಮೆರೆದಿದ್ದಾರೆ..

ಇದನ್ನೂ ಓದಿ; ನೀವು ಚಿಕನ್‌ ಲಿವರ್‌ ಪ್ರಿಯರಾ..?; ಹಾಗಾದ್ರೆ ಈ ವರದಿ ಓದಲೇಬೇಕು..

Share Post