CrimeNational

ಚಾಲಕನಿಗೆ ಹೃದಯಾಘಾತ; ಅಪಘಾತವಾಗಿ ಒಂಬತ್ತು ಮಂದಿ ದುರ್ಮರಣ

ಗಾಂಧೀನಗರ; ಗುಜರಾತ್‌ ನ ಸೂರತ್‌ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಒಂಬತ್ತು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 28 ಮಂದಿ ಗಾಯಗೊಂಡಿದ್ದಾರೆ. 

ನವಸಾರಿ ಜಿಲ್ಲೆಯಲ್ಲಿ ಈ ದುರಂತ ನಡೆದಿದೆ. ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವ ಮುಗಿಸಿ ಸೂರತ್‌ನಿಂದ ವಾಪಸ್ಸಾಗುತ್ತಿದ್ದ ಬಸ್ ಚಾಲಕನಿಗೆ ಹೃದಯಾಘಾತವಾಗಿದೆ. ಇದ್ರಿಂದಾಗಿ ಆ ಬಸ್‌ ನಿಯಂತ್ರಣ ತಪ್ಪಿ, ಟೊಯೋಟಾ ಫಾರ್ಚೂನರ್‌ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ.

28 ಮಂದಿ ಗಾಯಗೊಂಡಿದ್ದು, ಅದ್ರಲ್ಲಿ 11 ಮಂದಿಗೆ ತೀವ್ರ ಗಾಯಗಳಾಗಿವೆ. ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

 

Share Post