CrimeDistricts

Accident; ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದ ಕಾರು; ಮೂವರ ದುರ್ಮರಣ!

ಮಂಡ್ಯ; ಮಂಡ್ಯದಲ್ಲಿ (mandya) ಭೀಕರ ಅಪಘಾತ (accident) ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಮೊದಲಿಗೆ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅನಂತರ ಅದು ಪಕ್ಕದಲ್ಲೇ ಇದ್ದ ಹಳ್ಳಕ್ಕೆ ಉರುಳಿಬಿದ್ದಿದೆ. ಇದರಿಂದಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.

ಮಂಡ್ಯ ಜಿಲ್ಲೆ ಕೆಆರ್‌ ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು (akki hebbalu) ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮೃತರೆಲ್ಲರೂ ಕೆಆರ್‌ ಪೇಟೆ ನಿವಾಸಿಗಳು ಎಂದು ತಿಳಿದುಬಂದಿದೆ. ಮೂವತ್ತು ವರ್ಷ ಅನಿಕೇತನ್‌, ಮೋವತ್ತೆರಡು ವರ್ಷದ ಪವನ್‌ ಶೆಟ್ಟಿ ಹಾಗೂ ಮೂವತ್ತೆರಡು ವರ್ಷದ ಚಿರಂಜೀವಿ ಮೃತಪಟ್ಟವರು ಎಂದು ಗುರುತಿಸಲಾಗಿದೆ.

 

ಘಟನೆಯಲ್ಲಿ ಸಾಗರ್‌ ಎಂಬಾತನಿಗೆ ಕೂಡಾ ಗಂಭೀರ ಗಾಯಗಳಾಗಿವೆ. ಆತನನ್ನು ಮಂಡ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕಾರಿನಲ್ಲಿದ್ದವರು ಕೆಆರ್‌ ಪೇಟೆಯಿಂದ ಅಕ್ಕಿಹೆಬ್ಬಾಳು ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ಇಂತಹ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ನಾಳೆ, ಕಾಲುವೆಗಳಿಗೆ ವಾಹನಗಳು ಉರುಳಿಬಿದ್ದು ದುರಂತಗಳು ನಡೆಯುತ್ತಿವೆ. ನಾಲ್ಕು ವರ್ಷದ ಹಿಂದೆ ಪಾಂಡವಪುರದ ಬಳಿ ನಾಲೇಗೆ ಖಾಸಗಿ ಬಸ್‌ ಉರುಳಿಬಿದ್ದು ಹಲವರು ಸಾವನ್ನಪ್ಪಿದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.

https://kannada.newsx.com/crime/these-are-google-pay-robbers-what-did-they-do-to-block-the-lorry

Share Post