CrimeDistricts

ಚಿಕ್ಕಬಳ್ಳಾಪುರದಲ್ಲಿ ನೀರಿನಲ್ಲಿ ಕೊಚ್ಚಿಹೋದ 2 ಕಾರುಗಳು..!

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರದಲ್ಲಿ ಕಳೆದ ರಾತ್ರಿ ಭಾರಿ ಮಳೆಯಾಗಿದ್ದು, ಎರಡು ಕಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ.. ಬೆಂಗಳೂರು-ಹೈದರಾಬಾದ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.. ಅಂಡರ್‌ ಪಾಸ್‌ ನಲ್ಲಿ ನೀರು ಜೋರಾಗಿ ಹರಿಯುತ್ತಿದ್ದರಿಂದ ಈ ದುರ್ಘಟನೆ ನಡೆದಿದೆ..
ದೇವನಹಳ್ಳಿ ತಾಲ್ಲೂಕಿನ ನಾಗಾರ್ಜುನ ಕಾಲೇಜು ಸಮೀಪದ ಅಂಡರ್‌ ಪಾಸ್‌ ನಲ್ಲಿ ಈ ಘಟನೆ ನಡೆದಿದೆ.. ಮಾರುತಿ ಆಸ್ಟರ್‌ ಕಾರೊಂದು ಸಂಪೂರ್ಣವಾಗಿ ಅಂಡರ್‌ ಪಾಸ್‌ನಲ್ಲಿ ಮುಳುಗಡೆಯಾಗಿದ್ದು, ಅವಾಂತರ ಸೃಷ್ಟಿ ಮಾಡಿದೆ.. ಇನ್ನೊಂದು ಕಾರು ದಡದಲ್ಲಿ ಸಿಲುಕಿಕೊಂಡಿದೆ..
ಹರಳಗುರ್ಕಿಯ ವ್ಯಕ್ತಿಯೊಬ್ಬರು ಕಾರಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದರು.. ಈ ವೇಳೆ ವಿಪರೀತ ಮಳೆನೀರು ಹರಿಯುತ್ತಿದ್ದು, ಕಾರು ಆ ನೀರಿನಲ್ಲಿ ಸಿಲುಕಿ ಕೆಲದೂರ ಕೊಚ್ಚಿಹೋಗಿದೆ.. ಅದೃಷ್ಟವಶಾತ್‌ ಕಾರಿನಲ್ಲಿದ್ದ ಆರು ಮಂದಿ ಪಾರಾಗಿದ್ದಾರೆ.. ಕಾರನ್ನು ಅಲ್ಲಿಯೇ ನಿಲ್ಲಿಸಿ ಆಸ್ಪತ್ರೆಗೆ ತೆರಳಿದ್ದಾರೆ.. ಮತ್ತೊಂದು ಕಾರು ಕೂಡಾ ದಡದಲ್ಲಿ ಸಿಲುಕಿಕೊಂಡಿದ್ದು ಕಾರಿನಲ್ಲಿದ್ದವರು ಪರದಾಡಿದ ಘಟನೆ ನಡೆದಿದೆ..

Share Post