BengaluruCrime

ಠಾಣೆಗೇ ನುಗ್ಗಿದ ಮಹಿಳೆ; ಎಎಸ್‌ಐಗೆ ಬಾಟಲಿಯಿಂದ ಇರಿತ!

ಬೆಂಗಳೂರು; ಪೊಲೀಸ್‌ ಠಾಣೆಗೆ ನುಗ್ಗಿದ ಮಹಿಳೆಯೊಬ್ಬರು ಪೊಲೀಸ್‌ ಅಧಿಕಾರಿ ಮೇಲೆಯೇ ದಾಳಿ ಮಾಡಿರುವ ಘಟನೆ ನಡೆದಿದೆ.. ಬೆಂಗಳೂರಿನ ಗಂಗಮ್ಮನ ಗುಡಿ ಪೊಲೀಸ್‌ ಠಾಣೆಯಲ್ಲಿ ಈ ಘಟನೆ ನಡೆದಿದೆ.. ನಿನ್ನೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ..

ಇದನ್ನೂ ಓದಿ; ವಿಜಯಪುರದಲ್ಲಿ ಅಕಾಲಿಕ ಮಳೆ; ದ್ರಾಕ್ಷಿ, ಬಾಳೆ ತೋಟ ನಾಶ!

ಬಾಟಲಿಯಿಂದ ಎಎಸ್‌ಐಗೆ ಇರಿತ;

ಶನಿವಾರ ಅಶ್ವಿನಿ ಎಂಬ ಮಹಿಳೆ ಏಕಾಏಕಿ ಗಂಗಮ್ಮನ ಗುಡಿ ಪೊಲೀಸ್‌ ಠಾಣೆಗೆ ನುಗ್ಗಿದ್ದಾರೆ.. ಕೈಯಲ್ಲಿ ಒಡೆದ ಬಾಟೆಲ್‌ ಹಿಡಿದು ತಂದಿದ್ದ ಆಕೆ, ಎಎಸ್‌ಐ ನಾಗರಾಜ್‌ಗೆ ಅದರಿಂದ ಇರಿದಿದ್ದಾಳೆ. ಇದರಿಂದಾಗಿ ಎಎಸ್‌ಐ ನಾಗರಾಜ್‌ ಬಲಗೈಗೆ ಗಾಯವಾಗಿದೆ.. ಅವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.. ಆದ್ರೆ ಹೆಚ್ಚಿನ ಅನಾಹುತವಾಗಿಲ್ಲ..

ಇದನ್ನೂ ಓದಿ; ಅತಿಯಾಗಿ ಉಪ್ಪು ಸೇವನೆ ಮಾಡಿದರೆ ʻಆʼ ಶಕ್ತಿ ಕಡಿಮೆಯಾಗುತ್ತಂತೆ!

ಜಾಗದ ವಿಚಾರದಲ್ಲಿ ನ್ಯಾಯ ಸಿಗದಿದ್ದಕ್ಕೆ ಆಕ್ರೋಶ;

ಜಾಗವೊಂದರ ವಿಚಾರದಲ್ಲಿ ಅಶ್ವಿನಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು ಎಂದು ತಿಳಿದುಬಂದಿದೆ.. ಆದ್ರೆ ಆಕೆಗೆ ನ್ಯಾಯ ಸಿಕ್ಕಿಲ್ಲ ಎಂದು ಆಕ್ರೋಶ ಗೊಂಡಿದ್ದಾರೆ.. ಇದೇ ಕಾರಣಕ್ಕಾಗಿ ಅಶ್ವಿನಿ ಈ ರೀತಿಯಾಗಿ ದಾಳಿ ಮಾಡಿದ್ದಾಳೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್‌ ಲೋನ್‌ ಬೇಕಾ..?; ಹಾಗಾದರೆ ಈ ವಿಧಾನ ಅನುಸರಿಸಿ!

ಮಾನಸಿಕವಾಗಿ ಅಸ್ವಸ್ಥಳಾಗಿರುವ ಅಶ್ವಿನಿ;

ಆರೋಪಿ ಅಶ್ವಿನಿ ಮಾನಸಿಕವಾಗಿ ಅಸ್ವಸ್ಥಳು ಎಂದು ಹೇಳಲಾಗುತ್ತಿದೆ.. ಆಸ್ತಿ ವಿಚಾರವಾಗಿ ಆಕೆ ಹೆಚ್ಚು ತಲೆಕೆಡಿಸಿಕೊಂಡು ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ ಎಂದು ಹೇಳಲಾಗುತ್ತಿದೆ.. ಹೀಗಾಗಿ ಆಕೆಯನ್ನು ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.. ಇನ್ನು ಘಟನೆ ಸಂಬಂಧ ಗಂಗಮ್ಮನ ಗುಡಿ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಿಸಲಾಗಿದೆ.

ಇದನ್ನೂ ಓದಿ; ಕೇಕ್‌ನಲ್ಲೇ ಇದ್ದ ಯಮರಾಯ; ಹುಟ್ಟಹಬ್ಬದಂದೇ ಬಾಲಕಿ ಕೇಕ್‌ಗೆ ಬಲಿ!

 

Share Post