CrimeHealth

ಬೆಂಗಳೂರಲ್ಲಿ ಕಾರಿನ ಮೇಲೆ ಉರುಳಿದ ಮರ; ವೈದ್ಯ ದಂಪತಿ ಪಾರು!

ಬೆಂಗಳೂರು; ಬೆಂಗಳೂರಿನಲ್ಲಿ ವೈದ್ಯ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಮರವೊಂದರು ಉರುಳಿಬಿದ್ದಿದೆ.. ಇದರಿಂದಾಗಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.. ಅದೃಷ್ಟವಶಾತ್‌ ಕಾರಿನಲ್ಲಿದ್ದ ವೈದ್ಯ ದಂಪತಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ..

ಇದನ್ನೂ ಓದಿ; ಅಡ್ರೆಸ್‌ ಕೇಳುವ ನೆಪದಲ್ಲಿ ಹಿಂದೂ ಬಾಲಕಿಯ ಅಪಹರಣ ಯತ್ನ!

ಜೀವನ್‌ ಭಿಮಾನನಗರದಲ್ಲಿ ಈ ದುರ್ಘಟನೆ ನಡೆದಿದೆ.. ಬಿಬಿಎಂಪಿ ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.. ಹೆಮ್ಮರವಾಗಿದ್ದರೂ ಅದನ್ನು ಕಡಿಯದೇ ಹಾಗೆಯೇ ಬಿಡಲಾಗಿತ್ತು.. ಬೆಂಗಳೂರಿನಲ್ಲಿ ಮಳೆಯೂ ಇಲ್ಲ, ಗಾಳಿಯೂ ಇಲ್ಲ.. ಆದರೂ ಕೂಡಾ ಬೃಹತ್‌ ಮರ ಉರಳಿಬಿದ್ದಿದೆ.. ನೇರವಾಗಿ ಕಾರಿನ ಮೇಲೆಯೇ ಮರ ಉರುಳಿದೆ.. ಕೂದಲೆಳೆ ಅಂತರದಲ್ಲಿ ವೈದ್ಯ ದಂಪತಿ ಪಾರಾಗಿದ್ದಾರೆ..

ಇದನ್ನೂ ಓದಿ; ಹನುಮ ಭಕ್ತರ ಮೇಲೆ ಹರಿದ ಪಿಕಪ್‌ ವಾಹನ; ಮೂವರ ದಾರುಣ ಸಾವು!

ಬ್ರೂಕ್ ಫೀಲ್ಡ್ ಆಸ್ಪತ್ರೆಯ ಎಂಡಿ ಡಾಕ್ಟರ್ ಪ್ರದೀಪ್ ಹಾಗೂ ಅವರ ಪತ್ನಿ ಕಾರಿನಲ್ಲಿದ್ದರು ಎಂದು ತಿಳಿದುಬಂದಿದೆ.. ಇಬ್ಬರಿಗೂ ಕಾಲಿಗೆ ಬಲವಾದ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

ಇದನ್ನೂ ಓದಿ; ಪಾಕ್‌ಗೆ ಹೋಗಲು ತಯಾರಿ ನಡೆಸಿದ್ದ ಬಾಂಬರ್‌ಗಳು; ವಿದೇಶದಿಂದ ಬರ್ತಿತ್ತು ಹಣ!

 

Share Post