CrimeDistricts

ಕಮಲಾಪುರ ಬಳಿ ಭೀಕರ ಅಪಘಾತ; ಬೈಕ್‌ನಲ್ಲಿದ್ದ ಮೂವರ ದುರ್ಮರಣ!

ಕಲಬುರಗಿ; ರಾಜ್ಯದಲ್ಲಿ ನಿನ್ನೆ ವಿವಿಧ ಕಡೆ ನಡೆದ ಅಪಘಾತಗಳಲ್ಲಿ 51 ಮಂದಿ ಸಾವನ್ನಪ್ಪಿದ್ದರು.. ಇವತ್ತೂ ಕೂಡಾ ದುರಂತಗಳು ಮುಂದುವರೆದಿವೆ.. ಇಂದು ಕಲಬುರಗಿ ಜಿಲ್ಲೆ ಕಮಲಾಪುರ ತಾಲ್ಲೂಕಿನಲ್ಲಿ ಭೀಕರ ಅಪಘಾತ ನಡೆದಿದ್ದು, ಮೂವರು ಯುವಕರು ಸಾವನ್ನಪ್ಪಿದ್ದಾರೆ.. ಸರ್ಕಾರಿ ಬಸ್‌ ಹಾಗೂ ಬೈಕ್‌ ನಡುವೆ ಡಿಕ್ಕಿ ಸಂಭವಿಸಿದ್ದು, ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ..

ಮೂವರೂ ಯುವಕರು ಒಂದೇ ಬೈಕ್‌ನಲ್ಲಿ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್‌ ಗ್ರಾಮದಿಂದ ಕಲಬುರಗಿಗೆ ಹೋಗುತ್ತಿದ್ದರು.. ಈ ವೇಳೆ ಕಲಬುರಗಿಯಿಂದ ಹುಮನಾಬಾದ್ ಕಡೆಗೆ ಬರುತ್ತಿದ್ದ ಸರ್ಕಾರಿ ಬಸ್‌ ಡಿಕ್ಕಿ ಹೊಡೆದಿದೆ.. ಡಿಕ್ಕಿಯ ರಭಸಕ್ಕೆ ಮೂವರು ಯುವಕರೂ ಸಾವನ್ನಪ್ಪಿದ್ದಾರೆ..

ಕಿಣ್ಣಿ ಸಡಕ್ ಗ್ರಾಮದ ವಿಶಾಲ್ ಜಾಧವ್ (17), ಚಂದ್ರಕಾಂತ (20) ಮತ್ತು ಸಮೀರ್ (23) ಮೃತಪಟ್ಟವರಾಗಿದ್ದಾರೆ.. ಯುವಕರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ..

 

Share Post