DistrictsPolitics

ರಮೇಶ್‌ಕುಮಾರ್‌ಗೆ ಜ್ಞಾನೋದಯವಾಗಿದೆ, ದೇಶ ಲೂಟಿ ಮಾಡಿರುವುದು ಒಪ್ಪಿದ್ದಾರೆ; ಆರ್‌.ಅಶೋಕ್‌

ಮಂಡ್ಯ; ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ಗೆ ಜ್ಞಾನೋದಯವಾದಂತಿದೆ. ಹೀಗಾಗಿಯೇ, ನಾವೆಲ್ಲಾ 3-4 ತಲೆಮಾರು ತಿನ್ನುವಷ್ಟು ಸಂಪಾದಿಸಿದ್ದೇವೆ ಎಂದು ಹೇಳಿದ್ದಾರೆ ಎಂದು ಸಚಿವ ಆರ್‌. ಅಶೋಕ್‌ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್‌ ಪ್ರತಿಭಟನೆ ವೇಳೆ ಗಾಂಧಿ ಕುಟುಂಬದಿಂದಾಗಿ ನಾವಾಉ, ನೀವೆಲ್ಲಾ 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಹೀಗಾಗಿ ನಾವು ಈ ಗಾಂಧಿ ಕುಟುಂಬದ ಋಣ ತೀರಿಸುವ ಸಮಯ ಬಂದಿದೆ ಎಂದು ರಮೇಶ್‌ ಕುಮಾರ್‌ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆರ್‌.ಅಶೋಕ್‌, ಕಾಂಗ್ರೆಸ್‌ನವರು ದೇಶ ಲೂಟಿ ಮಾಡಿರುವುದನ್ನು ಈ ಮೂಲಕ ಒಪ್ಪಿಕೊಂಡಿದ್ದಾರೆ ಎಂದರು.

ನವಲತ್ತು ಕಮೀಷನ್‌ ಎಂದು ಬಿಜೆಪಿ ವಿರುದ್ಧ ಮಾತನಾಡುತ್ತಾರೆ. ಈಗ ಜನರಿಗೆ ಅರ್ಥವಾಗುತ್ತದೆ ಯಾರು ದೇಶ ಲೂಟಿ ಮಾಡಿದ್ದಾರೆ ಅನ್ನೋದು ಅಂತ ಅಶೋಕ್‌ ಹೇಳಿದರು. ಅಂದಹಾಗೆ ರಮೇಶ್‌ ಕುಮಾರ್‌ ಅವರು ಬಾಯಿ ತಪ್ಪಿ 3-4 ತಲೆಮಾರು ತಿನ್ನುವಷ್ಟು ಎಂದಿದ್ದಾರೆ. ಆದ್ರೆ ಅದು 10 ತಲೆಮಾರಿಗೆ ಆಗುವಷ್ಟು ಎಂದು ಹೇಳಬೇಕಿತ್ತು ಎಂದು ಅಶೋಕ್‌ ಇದೇ ವೇಳೆ ವ್ಯಂಗ್ಯವಾಡಿದರು.

Share Post