BengaluruCrime

ಪ್ರಿಯತಮೆ ಕೈಕೊಟ್ಟ ಹಿನ್ನೆಲೆ; ಬೆಂಕಿ ಹಚ್ಚಿಕೊಂಡು ದಹನವಾದ ಯುವಕ!

ಬೆಂಗಳೂರು; ಪ್ರಿಯತಮೆ ಕೈಕೊಟ್ಟು ಬೇರೆ ಯುವಕನ ಜೊತೆ ಮದುವೆಗೆ ಒಪ್ಪಿದ ಹಿನ್ನೆಲೆಯಲ್ಲಿ ಪ್ರಿಯಕರ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಕೆಂಗೇರಿಯ ಕೊಡಿಗೆ ಪಾಳ್ಯದಲ್ಲಿ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ತೀವ್ರ ಸುಟ್ಟು ಗಾಯಗಳಾಗಿದ್ದು ಯುವಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಕಳೆದ ರಾತ್ರಿ ಸಾವನ್ನಪ್ಪಿದ್ದಾನೆ. 

ಆನೇಕಲ್ ತಾಲೂಕಿನ ಜಿಗಣಿಯ ಕಲ್ಲುಬಾಳು ಗ್ರಾಮದ ರಾಕೇಶ್‌ ಮೃತ ಯುವಕನಾಗಿದ್ದಾನೆ. ಈತ ಐದಾರು ವರ್ಷಗಳಿಂದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದ್ರೆ ಅದ್ಯಾಕೋ ಯುವತಿ ಇತ್ತೀಚೆಗೆ ರಾಕೇಶ್‌ ನನ್ನು ದೂರ ಮಾಡುತ್ತಾ ಬಂದಿದ್ದಾಳೆ. ಜೊತೆಗೆ ಬೇರೊಬ್ಬನ ಜೊತೆ ಮದುವೆಗೆ ಗ್ರೀನ್‌ ಸಿಗ್ನಲ್‌ ತೋರಿಸಿದ್ದಾರೆ. ಈ ವಿಚಾರ ಗೊತ್ತಾಗಿ ಯುವತಿ ಜೊತೆ ರಾಕೇಶ್‌ ಜಗಳ ಮಾಡಿದ್ದಾನೆ. ಈ ವೇಳೆ ಯುವತಿ ಬೇರೊಬ್ಬನೊಂದಿಗೆ ಮದುವೆಯಾಗುತ್ತಿರುವ ಬಗ್ಗೆ ತನ್ನ ನಿರ್ಧಾರ ತಿಳಿಸಿದ್ದಾಳೆ.

ಯುವತಿ ಈ ವಿಚಾರ ಹೇಳುತ್ತಿದ್ದಂತೆ ರಾಕೇಶ್‌ ಯುವತಿಯ ಮುಂದೆಯೇ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಪ್ರಕರಣ ಸಂಬಂಧ ರಾಕೇಶ್ ಕುಟುಂಬಸ್ಥರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share Post