CinemaCrime

ಒಂದೂವರೆ ಸಾವಿರ ರೂಪಾಯಿಗಾಗಿ ತಂದೆಯನ್ನೇ ಕೊಂದ ಪಾಪಿ

ತುಮಕೂರು; ಒಂದೂವರೆ ಸಾವಿರ ರೂಪಾಯಿ ಹಣಕ್ಕಾಗಿ ಮಗನೊಬ್ಬ ತಂದೆಯನ್ನೇ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕಡಬ ಗ್ರಾಮದಲ್ಲಿ ನಡೆದಿದೆ. ರೇಣುಕಯ್ಯ ಎಂಬವವರೇ ಮಗನಿಂದಲೇ ಕೊಲೆಯಾದ ದುರ್ದೈವಿ.

ರೇಣುಕಯ್ಯ ಅವರ ಮಗ ರಮೇಶ್‌ ಎಲೆ ಹಾಗೂ ಅಡಿಕೆ ಮಾರಿ ಬಂದಿದ್ದ. ಅದರ ಹಣ ಒಂದೂವರೆ ಸಾವಿರ ರೂಪಾಯಿ. ಅದನ್ನು ತಂದೆಗೆ ಕೊಡದೇ ತನ್ನ ಬಳಿಯೇ ಇಟ್ಟುಕೊಂಡಿದ್ದ. ಹೀಗಾಗಿ ಕಳೆದ ರಾತ್ರಿ ತಂದೆ ರೇಣುಕಯ್ಯ ಅವರು ಎಲೆ, ಅಡಿಕೆ ಮಾರಿದ್ದರಿಂದ ಬಂದಿದ್ದ ಒಂದೂವರೆ ಸಾವಿರ ರೂಪಾಯಿ ಹಣವನ್ನು ನೀಡುವಂತೆ ಮಗನನ್ನು ಕೇಳಿದ್ದ.

ಇದರಿಂದಾಗಿ ಇಬ್ಬರ ನಡುವೆ ವಾಗ್ದಾಳಿ ನಡೆದಿದೆ. ಮೊದಲೇ ಕುಡಿದ ಮತ್ತಿನಲ್ಲಿದ್ದ ಮಗ ರಮೇಶ್‌ ಆಕ್ರೋಶಗೊಂಡಿದ್ದಾರೆ. ಮಚ್ಚಿನಿಂದ ತಂದೆಯ ಮೇಲೆಯೇ ದಾಳಿ ಮಾಡಿದ್ದಾನೆ. ಇದರಿಂದಾಗಿ ತಂದೆ ರೇಣುಕಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗುಬ್ಬಿ ಪೊಲೀಸರು ಆರೋಪಿ ರಮೇಶ್‌ನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Share Post