BengaluruCrime

ಚೈತ್ರಾ ಕುಂದಾಪುರ ಆರೋಪಕ್ಕೆ ಗೋವಿಂದ ಬಾಬು ಪೂಜಾರಿ ಹೇಳಿದ್ದೇನು..?

ಬೆಂಗಳೂರು; ಇಂದು ಬೆಳಗ್ಗೆ ಚೈತ್ರಾ ಕುಂದಾಪುರ ಸಿಸಿಬಿ ಕಚೇರಿಗೆ ಬಂದಾಗ, ಇಂದಿರಾ ಕ್ಯಾಂಟೀನ್‌ ಬಿಲ್‌ ಬಾಕಿ ಇತ್ತು. ಅದನ್ನು ಪಡೆಯುವುದಕ್ಕಾಗಿ ನನ್ನ ಮೇಲೆ ಇಲ್ಲದ ಆರೋಪ ಮಾಡಲಾಗಿದೆ ಎಂದು ಹೇಳಿದ್ದರು. ಈ ಬಗ್ಗೆ ಹಣ ಕಳೆದುಕೊಂಡಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಮಾತನಾಡಿದ್ದಾರೆ. ಈ ಪ್ರಕರಣಕ್ಕೂ ಇಂದಿರಾ ಕ್ಯಾಂಟೀನ್‌ಗೂ ಯಾವುದೇ ಸಂಬಂಧವಿಲ್ಲ. ನನ್ನ ಉದ್ಯಮ ವ್ಯವಹಾರದಲ್ಲಿ ಇಂದಿರಾ ಕ್ಯಾಂಟೀನ್‌ ವ್ಯವಹಾರ ಶೇ.೧೦ರಷ್ಟಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

ಯಾವುದೇ ಕಾರಣಕ್ಕೂ ಈ ಪ್ರಕರಣದಲ್ಲಿ ನನ್ನ ಬ್ಯುಸಿನೆಸ್‌ ವಿಚಾರ ಬರುವುದಿಲ್ಲ. ನಾನು ಎಂದೂ ಈ ಬಗ್ಗೆ ಮಾತನಾಡಿಲ್ಲ. ನನಗೆ ಅವರು ರಾಜಕೀಯವಾಗಿ ಮೋಸ ಮಾಡಿದ್ದಾರೆ. ಸದಕ್ಕೆ ಸಂಬಂಧಪಟ್ಟ ದಾಖಲೆಗಳು ನನ್ನ ಬಳಿ ಇವೆ. ಎಲ್ಲವನ್ನೂ ಸಿಸಿಬಿಗೆ ಕೊಟ್ಟಿದ್ದೇನೆ ಎಂದು ಗೋವಿಂದ ಬಾಬು ಪೂಜಾರಿ ಹೇಳಿದ್ದಾರೆ.

ಅವರೆಲ್ಲಾ ಪ್ಲ್ಯಾನ್‌ ಮಾಡಿ ನನಗೆ ಮೋಸ ಮಾಡಿದ್ದಾರೆ. ಇಂತಹ ವಂಚನೆಗಳು ಯಾರಿಗೂ ಆಗಬಾರದು. ನನ್ನ ಬಳಿ ಇರುವ ಸಿಸಿ ಟಿವಿ ವಿಡಿಯೋಗಳು, ಆಡಿಯೋಗಳು, ಇತರೆ ಎಲ್ಲಾ ಸಾಕ್ಷ್ಯಗಳನ್ನೂ ನಾನು ಸಿಸಿಬಿ ನೀಡಲಿದ್ದೇನೆ. ನಾನು ಕಷ್ಟಪಟ್ಟು ದುಡಿದು ಒಟ್ಟುಗೂಡಿಸಿರುವ ಹಣ ಅದು. ಹೀಗಾಗಿ ಯಾವುದೇ ಕಾರಣಕ್ಕೂ ಈ ಪ್ರಕರಣದಿಂದ ನಾನು ಹಿಂಧೆ ಸರಿಯೋದಿಲ್ಲ ಎಂದು ಗೋವಿಂದ ಬಾಬು ಪೂಜಾರಿ ಹೇಳಿಕೊಂಡಿದ್ದಾರೆ.

 

Share Post