DistrictsLifestyle

ಅರಮನೆಯಲ್ಲಿ ಆಯುಧ ಪೂಜೆ ಸಡಗರ; ಪಟ್ಟದ ಹಸು, ಆನೆ, ಕುದುರೆಗಳಿಗೆ ಪೂಜೆ

ಮೈಸೂರು; ಮೈಸೂರಿನ ಅರಮನೆಯಲ್ಲಿ ಆಯುಧ ಪೂಜೆಯ ಸಡಗರ ಜೋರಾಗಿದೆ. ರಾಜ ವಂಶಸ್ಥ ಯಧುವೀರ್‌ ಒಡೆಯರ್‌ ಅವರು ಆಯುಧ ಪೂಜೆ ನೆರವೇರಿಸಿದ್ದಾರೆ.

ಅರಮನೆ ಒಳಗೆ ಪಟ್ಟದ ಆನೆ, ಪಟ್ಟದ ಕುದುರೆ, ಹಸುಗಳಿಗೆ ಯಧುವೀರ್‌ ಅವರು ಪೂಜೆ ನೆರವೇರಿಸಿದರು. ಆನೆಗಳು, ರಾಜಮನೆತನದವರು ಬಳಸುತ್ತಿದ್ದ ಕಾರುಗಳು, ಕತ್ತಿ ಮುಂತಾದ ವಸ್ತುಗಳಿಗೂ ಪೂಜೆ ನೆರವೇರಿಸಲಾಗಿದೆ. ಇದೇ ವೇಳೆ ಫಿರಂಗಿಗಳಿಗೂ ರಾಜ ಯಧುವೀರ್‌ ಅವರು ಪೂಜೆ ಮಾಡಿದರು.

 

Share Post