BengaluruCrime

ವರದಕ್ಷಿಣೆಗಾಗಿ ಪತ್ನಿಯನ್ನು ಕೊಂದ ಪಾಪಿ ಪತಿ: ಮಗಳನ್ನು ಕಳೆದುಕೊಂಡು ಪೋಷಕರ ಕಣ್ಣೀರು

ಬೆಂಗಳೂರು: ವರದಕ್ಷಿನೆ ಪಿಡುಗು ಅದೆಷ್ಟೋ ಹೆಣ್ಣು ಮಕ್ಕಳ ಬಾಳನ್ನು ಹಾಳು ಮಾಡಿದೆ. ಲೆಕ್ಕವಿಲ್ಲದಷ್ಟು ಹೆಣ್ಣುಮಕ್ಕಳು ವರದಕ್ಷಿಣೆ ಎಂಬ ಪಿಡುಗಿಗೆ ಬಲಿಯಾಗಿದ್ದಾರೆ. ಕಾನೂನು ಪ್ರಕಾರ ಇದು ಅಪರಾಧವಾದರೂ ಇಂದಿಗೀ ಇದು ಸಂಪೂರ್ಣವಾಗಿ ತೊಲಗಿಲ್ಲ. ದಿನಂಪ್ರತಿ ಒಂದಲ್ಲಾ ಒಂದು ಕೇಸ್‌ಗಳು ನಮೂದಾಗುತ್ತಲೇ ಇರುತ್ತವೆ. ಇಂದೂ ಕೂಡ ವರದಕ್ಷಿಣೆಗಾಗಿ ಪತ್ನಿಯಿಂದ ಕೊಲೆ ಮಾಡಿರುವ ಹೇಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಸುಂಕದಕಟ್ಟೆಯಲ್ಲಿ ವಾಸವಾಗಿದ್ದ ಸೌಮ್ಯ ಹಾಗೂ ಯೋಗೀಶ್‌ ದಂಪತಿ ನಡುವೆ ಹಲವು ಬಾರಿ ಹಣಕಾಸು ವಿಚಾರವಾಗಿ ಗಲಾಟೆ ನಡೆದಿದೆ. ಮೂರು ವರ್ಷಗಳ ಹಿಂದೆ ಸೌಮ್ಯಾಳನ್ನು ಮದುವಾಯದ ಯೋಗೀಶ್‌ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದಾನೆ. ಆತ ಹೊಡೆದು ಕಳಿಸಿದಾಗಲೆಲ್ಲಾ ಸೌಮ್ಯಾ ತನ್ನ ತವರು ಮನೆಯಿಂದ ಹಣ ತಂದು ಕೊಟ್ಟಿದ್ದಾಳೆ. ನಿನ್ನೆ ಕೂಡ ಹಣ ತರುವಂತೆ ಪೀಡಿಸಿದ್ದಾರೆ. ಇದಕ್ಕೆ ಸೌಮ್ಯಾ ಒಪ್ಪದಿದ್ದಕ್ಕೆ ಚೆನ್ನಾಗಿ ಹೊಡೆದು ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.

ವರದಕ್ಷಿಣ ಆರೋಪದಡಿ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳಿಸಲಾಗಿದೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ. ಇತ್ತ ಮಗಳನ್ನು ಕಳೆದುಕೊಂಡ ಸೌಮ್ಯಾ ಪೋಷಕರು ಆಕ್ರಂದನ ಮುಗಿಲುಮುಟ್ಟಿದೆ.

Share Post