CrimeDistricts

ಕ್ಷುಲ್ಲಕ ಕಾರಣಕ್ಕೆ ಅಣ್ಣನ ಮಗನನ್ನು ಕೊಚ್ಚಿ ಕೊಲೆ ಮಾಡಿದ ವ್ಯಕ್ತಿ!

ರಾಮನಗರ; ಜಮೀನಿನಲ್ಲಿ ಹಲ್ಲು ಕುಯ್ಯುವ ವಿಚಾರಕ್ಕೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ತನ್ನ ಅಣ್ಣನ ಮಗನನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ.. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.. ಕೊಲೆ ಮಾಡಿದ ನಂತರ ಮೃತದೇಹವನ್ನು ರಸ್ತೆ ಬದಿ ತಂದು ಬಿಸಾಡಲಾಗಿದ್ದು, ಚಿಕ್ಕಪ್ಪನೇ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಫೋರಂ ಮಾಲ್‌ ಬಳಿ ಯುವತಿಗೆ ಲೈಂಗಿಕ ಕಿರುಕುಳ; ನಾಲ್ವರ ಅರೆಸ್ಟ್‌!

29 ವರ್ಷದ ರಂಜಿತ್‌ ಕುಮಾರ್‌ ಎಂಬಾತನೇ ಕೊಲೆಯಾವ ಯುವಕನಾಗಿದ್ದಾನೆ.. ಕೊಲೆಯಾದ ರಂಜಿತ್‌ ಕುಮಾರ್‌, ಹೊಲದಲ್ಲಿ ಕುಲ್ಲು ಕುಯ್ಯುವ ವಿಚಾರದಲ್ಲಿ ಚಿಕ್ಕಪ್ಪ ನಾಗರಾಜು ಪತ್ನಿ ಮಂಗಳಮ್ಮ ಹಾಗೂ ಅವರ ಮಗ ಸುನಿಲ್‌ ಕುಮಾರ್‌ ಜೊತೆ ಜಗಳವಾಡಿದ್ದ ಎನ್ನಲಾಗಿದೆ.. ಈ ವಿಚಾರ ಚಿಕ್ಕಪ್ಪ ನಾಗರಾಜುಗೆ ಗೊತ್ತಾಗಿ, ಆತ ಮಚ್ಚಿನಿಂದ ರಂಜಿತ್‌ ಕುಮಾರ್‌ ತಲೆಗೆ ಹೊಡೆದಿದ್ದಾನೆ.. ಇದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅನಂತರ ಶವವನ್ನು ರಸ್ತೆ ಬದಿ ತಂದು ಹಾಕಲಾಗಿದೆ..

ಇದನ್ನೂ ಓದಿ; ಮದರಸಾದಲ್ಲಿ ಪೆನ್ನಿಗಾಗಿ ಜಗಳ!; 12 ವರ್ಷದ ವಿದ್ಯಾರ್ಥಿಯ ಕೊಲೆ!

ಪೊಲೀಸರು ಚಿಕ್ಕಪ್ಪನ ವಿಚಾರಣೆ ನಡೆಸಿದ್ದು, ಈ ವೇಳೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.. ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Share Post