CrimeNational

ಮದರಸಾದಲ್ಲಿ ಪೆನ್ನಿಗಾಗಿ ಜಗಳ!; 12 ವರ್ಷದ ವಿದ್ಯಾರ್ಥಿಯ ಕೊಲೆ!

ಬಲರಾಂಪುರ (ಉತ್ತರಪ್ರದೇಶ); ಉತ್ತರ ಪ್ರದೇಶದ ಬಲರಾಂಪುರದಲ್ಲಿರುವ ಮದರಸಾ ಒಂದರಲ್ಲಿ ಪೆನ್ನಿಗಾಗಿ ಇಬ್ಬರು ಬಾಲಕರ ನಡುವೆ ಜಗಳವಾಗಿದ್ದು, ಈ ವೇಳೆ ಒಬ್ಬ ಬಾಲಕನ ಕೊಲೆಯಾಗಿದೆ.. ಮದರಸಾದಲ್ಲಿ ಆಗಸ್ಟ್‌ 2 ರಂದು 12 ವರ್ಷದ ಬಾಲಕನ ಶವ ಪತ್ತೆಯಾಗಿತ್ತು. ಪೊಲೀಸರು ಪರಿಶೀಲನೆ ನಡೆಸಿದಾಗ ಅದು ಕೊಲೆ ಅನ್ನೋದು ಗೊತ್ತಾಗಿತ್ತು.. ವಿಚಾರಣೆ ನಡೆಸಿದಾಗಿ ಇದು ಪೆನ್ನಿಗಾಗಿ ನಡೆದ ಕೊಲೆ ಎಂಬುದು ಗೊತ್ತಾಗಿದೆ..

ಇದನ್ನೂ ಓದಿ; ಪೋಸ್ಟಾಫೀಸ್‌ ಆರ್‌ಡಿ; ತಿಂಗಳಿಗೆ 5 ಸಾವಿರ ಹೂಡಿಕೆ, ಕೈಗೆ ಬರೋದು 8 ಲಕ್ಷ ರೂಪಾಯಿ!

ಒಂದೇ ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಪೆನ್ನಿಗಾಗಿ ಜಗಳ ಮಾಡಿಕೊಂಡಿದ್ದಾರೆ.. ಇದು ತಾರಕಕ್ಕೇರಿದ್ದು, ಒಬ್ಬ ವಿದ್ಯಾರ್ಥಿ ಇನ್ನೊಬ್ಬನ ಮೇಲೇ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ.. ಇದರಿಂದಾಗಿ 12 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ನಂತರ ಕೊಲೆ ಮಾಡಿದ ಬಾಲಕ ಏನೂ ತಿಳಿಯದವನಂತೆ ಕೂತಿದ್ದ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ದಸರಾ ಬಳಿಕ ಸಂಪುಟ ಸರ್ಜರಿಯಾಗುತ್ತಾ..?; ವೇಣುಗೋಪಾಲ್‌, ಸುರ್ಜೇವಾಲಾ ಗರಂ ಆಗಿದ್ದೇಕೆ..?

ಆರೋಪಿ ಕೆಲ ದಿನಗಳ ಹಿಂದೆ ಮಾರುಕಟ್ಟೆಗೆ ಹೋಗಿ ಚಾಕುವನ್ನು ಖರೀದಿ ಮಾಡಿ ಸೂಟ್‌ಕೇಸ್‌ನಲ್ಲಿ ಇಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ.. ಸದ್ಯ ಬಾಲಕನನ್ನು ವಶಕ್ಕೆ ತೆಗೆದುಕೊಂಡು ಆತನನ್ನು ರಿಹಬಿಲಿಟೇಷನ್‌ ಸೆಂಟರ್‌ನಲ್ಲಿಡಲಾಗಿದೆ..

Share Post