CrimeNational

ನೆಲಕ್ಕುರುಳಿದ ಬೃಹತ್‌ ಜಾಹೀರಾತು ಬೋರ್ಡ್‌; 14 ಮಂದಿ ದುರ್ಮರಣ!

ಮುಂಬೈ; ಕೆಲ ದಿನಗಳಿಂದ ದೇಶದ ಹಲವೆಡೆ ಮಳೆಯಾಗುತ್ತಿದೆ.. ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಹಲವು ಅನಾಹುತಗಳು ನಡೆದಿದೆ.. ಮುಂಬೈನ ಘಾಟ್‌ ಕೋಪರ್‌ನಲ್ಲಿ ಬೃಹತ್‌ ಜಾಹೀರಾತು ಫಲಕ ನೆಲಕ್ಕೆ ಬಿದ್ದಿದ್ದು, ಭಾರಿ ದುರಂತ ಸಂಭವಿಸಿದೆ.. ದುರ್ಘಟನೆಯಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ.

ಫಾಟ್‌ ಕೋಪರ್‌ನಲ್ಲಿರುವ ಪೆಟ್ರೋಲ್‌ ಬಂಕ್‌ ಎದುರುಗಡೆ ಬೈಹತ್‌ ಜಾಹೀರಾತು ಫಲಕ ಇತ್ತು.. ಇದು ಪೆಟ್ರೋಲ್‌ ಬಂಕ್‌ ಬಳಿ ನಿಂತಿದ್ದ ಕಾರುಗಳ ಮೇಲೆ ಏಕಾಏಕಿ ಉರುಳಿಬಿದ್ದಿದೆ.. ಇದರಿಂದಾಗಿ 14 ಮಂದಿ ಸಾವನ್ನಪ್ಪಿದ್ದರೆ, 60 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ..

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಘಟನೆಗೆ ವಿಷಾಧ ವ್ಯಕ್ತಪಡಿಸಿದ್ದಾರೆ.. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ..

 

Share Post