BengaluruCrime

ಹೊಸಕೋಟೆಯಲ್ಲಿ ನಡೆಯಿತಾ ಬಡಿದಾಟ..?; ಕಾರಿನಲ್ಲಿ ಬಂದ ವ್ಯಕ್ತಿಯ ಕೊಂದಿದ್ದು ಯಾಕೆ..?

ಹೊಸಕೋಟೆ; ವ್ಯಕ್ತಿಯೊಬ್ಬ ಕಾರನ್ನು ಅಡ್ಡಾದಿಡ್ಡಿ ಚಾಲನೆ ಮಾಡುತ್ತಿದ್ದ.. ಸರಿಯಾಗಿ ಚಾಲನೆ ಮಾಡಪ್ಪ ಎಂದು ಹೇಳಿದ್ದಕ್ಕೆ ಆತ ಕೆರಳಿದ್ದಾನೆ.. ಕಾರಿನಲ್ಲಿದ್ದವರೆಲ್ಲಾ ಒಂದಾಗಿದ್ದಾರೆ.. ಕೊನೆಗೆ ಪ್ರಶ್ನೆ ಮಾಡಿದವನನ್ನು ಕೊಲೆಯೇ ಮಾಡಿಬಿಟ್ಟಿದ್ದಾರೆ.. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಡಾಬಾ ಬಳಿ ಈ ಕೃತ್ಯ ಎಸಗಲಾಗಿದೆ..

ಹೊಸಕೋಟೆ ಬಳಿಯ ಗಂಗಾಪುರ ನಿವಾಸಿ ನವೀನ್ ನಾಯಕ್ (27) ಎಂಬಾತನೇ ಕೊಲೆಯಾದ ವ್ಯಕ್ತಿ.. ತರಕಾರಿ ವ್ಯಾಪಾರ ಮಾಡುವ ನವೀನ್‌ ನಾಯಕ್‌ ಹೊಸಕೋಟೆಗೆ ಬರುತ್ತಿದ್ದ.. ಈ ವೇಳೆ ನಾಲ್ಕೈದು ಜನರಿದ್ದ ಕಾರು ಅಡ್ಡಾದಿಡ್ಡಿ ಹೋಗುತ್ತಿತ್ತು.. ಹೀಗಾಗಿ ಸರಿಯಾಗಿ ಕಾರು ಚಲಾಯಿಸಿ ಎಂದು ನವೀನ್‌ ಹೇಳಿದ್ದಾರೆ.. ಇದರಿಂದ ಕೆರಳಿದ ಕಾರಿನಲ್ಲಿದ್ದವರೆಲ್ಲಾ ಮಾರಕಾಸ್ತ್ರಗಳಿಂದ ನವೀನ್‌ ನಾಯಕ್‌ ಮೇಲೆ ದಾಳಿ ಮಾಡಿದ್ದಾರೆ.. ಇದರಿಂದಾಗಿ ನವೀನ್‌ ನಾಯಕ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ..

ಹೊಸಕೋಟೆ ಕಡೆಯಿಂದ ಹೆದ್ದಾರಿಯಲ್ಲಿ ಎರಡು ಕಾರುಗಳು ಬಂದಿದ್ದು, ಎರಡೂ ಕಾರಿನವರು ಸುಮಾರು ಹತ್ತು ಕಿಲೋ ಮೀಟರ್‌ ವರೆಗೆ ಓವರ್‌ ಟೇಕ್‌ ಮಾಡಿಕೊಂಡು ಬಂದಿವೆ.. ಬಳಿಕ ಎರಡೂ ಕಾರಿನಲ್ಲಿದ್ದವರ ನಡುವೆ ಗಲಾಟೆಗೆ ನಡೆದಿದ್ದು, ಆಲ್ಟೋ ಕಾರಲ್ಲಿದ್ದ ನಾಲ್ವರು ಓಮ್ನಿ ಕಾರಲ್ಲಿದ್ದವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.. ಓಮ್ನಿ ಕಾರಿನಲ್ಲಿದ್ದ ಓರ್ವ ಸಾವನ್ನಪ್ಪಿದ್ದಾನೆ.. ಈ ಬಗ್ಗೆ ಬಗ್ಗೆ ಹೊಸಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..

 

Share Post