CrimeDistricts

ಮರವೊಂದಕ್ಕೆ ಆಡಿ ಕಾರು ಡಿಕ್ಕಿ; ಮೂವರು ವಿದ್ಯಾರ್ಥಿಗಳ ದುರ್ಮರಣ!

ಕೋಲಾರ; ಐಶಾರಾಮಿ ಆಡಿ ಕಾರೊಂದು ಮರಕ್ಕೆ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ.. ಕೋಲಾರದ ಹೊರವಲಯದ ಸಹಕಾರ ನಗರದಲ್ಲಿ ನಡೆದಿದೆ.. ಆಡಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.. ಈ ಕಾರನಲ್ಲಿ ನಾಲ್ವರಿದ್ದು, ಮೂವರು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪವಾಡ ಸದೃಷ ರೀತಿಯಲ್ಲಿ ಬದುಕುಳಿದುಬಂದಿದ್ದಾರೆ..

ಇದನ್ನೂ ಓದಿ; ಹಾಸ್ಟೆಲ್‌ನಲ್ಲಿ ಇದೆಲ್ಲಾ ನಡೆಯುತ್ತಾ..?; ದಾಳಿ ನಡೆಸಿದ ಅಧಿಕಾರಿಗಳಿಗೇ ಶಾಕ್‌!

ಮೃತರು ರೇವಾ ಯೂನಿವರ್ಸಿಟಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.. ಮೃತರನ್ನು ಬಳ್ಳಾರಿ ಮೂಲದ ಬಸವರಾಜ್‌, ಕೋಲಾರ ಜಿಲ್ಲೆ ಬಂಗಾರಪೇಟೆಯ ನಿಶ್ಚಲ್‌ ಹಾಗೂ ಹಾಸನ ಮೂಲದ ಹರ್ಷವರ್ದನ್‌ ಎಂದು ಗುರುತಿಸಲಾಗಿದೆ.. ಬಂಗಾರಪೇಟೆಯ ಸಾಯಿ ಗಗನ್‌ ಅಚ್ಚರಿ ರೀತಿಯಲ್ಲಿ ಪಾರಾಗಿ ಬಂದಿದ್ದಾರೆ.

ಇದನ್ನೂ ಓದಿ; ವರ್ಗಾವಣೆಯಾಗಿದ್ದ ಪಿಎಸ್‌ಐ ಪರಶುರಾಮ್‌ ಮೃತಪಟ್ಟಿದ್ದು ಹೇಗೆ..?; ಶಾಸಕನ ಮೇಲೆ ಆರೋಪ ಏನು..?

ಸಾಯಿ ಗಗನ್‌ ಅವರ ಸಹೋದರಿ ಮದುವೆ ಇತ್ತು.. ಹೀಗಾಗಿ ಮದುವೆಯ ಆಮಂತ್ರಣ ಹಂಚೋದಕ್ಕಾಗಿ ಇವರೆಲ್ಲಾ ಕಾರಿನಲ್ಲಿ ಹೋಗುತ್ತಿದ್ದರು.. ಈ ವೇಳೆ ಈ ದುರಂತ ನಡೆದಿದೆ.. ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Share Post