DistrictsPolitics

ಉಚಿತಗಳ ಮುಂದೆ ನಮ್ಮ ಅಭಿವೃದ್ಧಿ ಕೆಲಸಗಳು ಕೊಚ್ಚಿಹೋದವು; ಮಾಧುಸ್ವಾಮಿ ಅಳಲು

ಚಿಕ್ಕನಾಯಕನಹಳ್ಳಿ; ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿನ ಬಳಿಕ ಮಾಜಿ ಸಚಿವ ಮಾಧುಸ್ವಾಮಿ ಮೌನಕ್ಕೆ ಜಾರಿದ್ದರು. ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಸೋಲಿನ ಬಗ್ಗೆ ವಿಮರ್ಶೆಯನ್ನೂ ಮಾಡಿರಲಿಲ್ಲ. ಇದೀಗ, ಅವರು ಕೊನೆಗೂ ಸೋಲಿನ ಬಗ್ಗೆ ಮಾತನಾಡಿದ್ದಾರೆ. ಸಾಕಷ್ಟು ಅಭಿವೃದ್ಧಿ ಮಾಡಿದರೂ ಜನರು ಮತ ಹಾಕದಿದ್ದುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿನ್ನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಮಾತನಾಡಿದ ಅವರು, ನಾನು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿಸಿದ್ದೆ. ಜನರು ಅವೆಲ್ಲಾ ನಮ್ಮ ಕೆಲಸಗಳು ಎಂದು ಭಾವಿಸಲಿಲ್ಲ. ಬದಲಾಗಿ ಉಚಿತ ಗ್ಯಾರೆಂಟಿಗಳಿಗೆ ಮಾರುಹೋದರು. ಉಚಿತಗಳ ಮುಂದೆ ನಮ್ಮ ಅಭಿವೃದ್ಧಿ ಕೆಲಸಗಳು ಕೊಚ್ಚಿಹೋದವು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನನ್ನಂತೆ ರಾಜ್ಯದಲ್ಲಿ ಹಲವಾರು ಶಾಸಕರು ಉತ್ತಮ ಕೆಲಸ ಮಾಡಿದ್ದರು. ಅವರು ಕೂಡಾ ಸೋತಿದ್ದಾರೆ. ನಮ್ಮ ಕೆಲಸ ಪ್ರತಿಫಲ ಸಿಗಲಿಲ್ಲ. ಕ್ಷೇತ್ರದ ತಮ್ಮ ಕೆಲಸವೆಂದು ಜನರಿಗೆ ಅನಿಸಲೇ ಇಲ್ಲ. ಕಾಂಗ್ರೆಸ್ ನವರು ಕೊಡುವ ಅಕ್ಕಿ, ದುಡ್ಡೇ ಶ್ರೇಷ್ಠ ಅನಿಸಿತು ಎಂದು ಅಳಲು ತೋಡಿಕೊಂಡಿದ್ದಾರೆ.

Share Post