CrimeDistricts

ಸ್ಯಾಂಟ್ರೋ ರವಿ ತಂಗಿದ್ದ 300 ಮೀ. ದೂರದಲ್ಲೇ ಆರಗ ಇದ್ರು; ಆರೋಪ

ಮೈಸೂರು; ಗುಜರಾತ್‌ನ ಅಲಹಾಬಾದ್‌ನಲ್ಲಿ ಸ್ಯಾಂಟ್ರೋ ರವಿ ತಂಗಿದ್ದ ಜಾಗದಿದ್ದ 300 ಮೀಟರ್‌ ದೂರದಲ್ಲೇ ಗೃಹ ಸಚಿವ ಆರಗ ಜ್ಞಾನೇಂದ್ರ ತಂಗಿದ್ದರು ಎಂದು ಕಾಂಗ್ರೆಸ್‌ ವಕ್ತಾರ ಲಕ್ಷ್ಮಣ್‌ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು.

ಸ್ಯಾಂಟ್ರೋ ರವಿ ಬಂಧಿಸಲು ಪೊಲೀಸ್ ಇಲಾಖೆ ಇಷ್ಟೊಂದು ಸಾಹಸ ಮಾಡುವ ಅವಶ್ಯಕತೆ ಏನಿತ್ತು.? ಆತನ ಮೇಲೆ ಹಾಕಿರುವ ಕೇಸ್ ಕೋರ್ಟಿನಲ್ಲಿ ನಿಲ್ಲಲ್ಲ. ಗುಜರಾತ್ ನಲ್ಲಿ ಗೃಹ ಮಂತ್ರಿ ಅರಗ ಜ್ಞಾನೇಂದ್ರಗೆ ಏನು ಕೆಲಸ ಇತ್ತು.? ಪೂರ್ವ ನಿಯೋಜಿತ ಕೆಲಸವೇನಾದರೂ ಇತ್ತೇ.? ಯಾರ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡಿ ಅರಗ ಗುಜರಾತ್ ಗೆ ತೆರಳಿದ್ದರು? ಎಂದು ಲಕ್ಷ್ಮಣ್‌ ಪ್ರಶ್ನೆ ಮಾಡಿದ್ದಾರೆ.

ಸ್ಯಾಂಟ್ರೋ ರವಿ ವಿಚಾರದಲ್ಲಿ ಬಿಜೆಪಿ ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದೆ. ಬಿಜೆಪಿಯ ಮಹಾ ನಾಯಕರ ಚರಿತ್ರೆ ಸ್ಯಾಂಟ್ರೋ ರವಿ ಕೈಯಲ್ಲಿದೆ. ಅದನ್ನ ಮರೆಮಾಚಲು ಗುಜರಾತ್ ಗೆ ಹೋಗಿದ್ರಾ.? ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಪ್ರಶ್ನೆ ಮಾಡಿದರು. ಬಿಜೆಪಿಯ ಬಾಂಬೆ ಬಾಯ್ಸ್ ಭವಿಷ್ಯ ಕೂಡ ಸ್ಯಾಂಟ್ರೋ ರವಿ ಕೈಯಲ್ಲಿದೆ. ಸ್ಯಾಂಟ್ರೋ ರವಿಗೆ ಯಾವ ರೀತಿ ಹೇಳಿಕೆ ಕೊಡಬೇಕು ಎಂಬುದನ್ನು ಹೇಳಿಕೊಡಲು ಅಲ್ಲಿಗೆ ಹೋಗಿದ್ರಾ ಅರಗ ಜ್ಞಾನೇಂದ್ರ ಎಂದು ಕೇಳಿದರು.

Share Post