Districts

ಎಲ್ಲೆ ಕೋಮು ಗಲಭೆ ನಡೆದರೂ ಅದ್ರಲ್ಲಿ ಕಾಂಗ್ರೆಸ್‌ ಕೈವಾಡ; ಸಚಿವ ಆರ್‌.ಅಶೋಕ್‌ ಆರೋಪ

ದಾವಣಗೆರೆ: ಎಲ್ಲೆ ಕೋಮು ಗಲಭೆ ನಡೆದರೂ ಅದ್ರಲ್ಲಿ ಕಾಂಗ್ರೆಸ್‌ ಕೈವಾಡ ಇರುತ್ತದೆ ಎಂದು ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು,  ಕಾಂಗ್ರೆಸ್‌ ಅಲ್ಪಸಂಖ್ಯಾತರ ಓಲೈಕೆಗೆ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ಪ್ರಮುಖ ರೂವಾರಿಯೇ ಕಾಂಗ್ರೆಸ್‌ ಮುಖಂಡ ಅಲ್ತಾಫ್‌ ಹಳ್ಳೂರ ಎಂದು ಆರೋಪಿಸಿರುವ ಸಚಿವರು, ಎಲ್ಲೇ ಕೋಮು ಗಲಭೆ ನಡೆದರೂ ಅದರ ಹಿಂದೆ ಕಾಂಗ್ರೆಸ್‌ ಇರುತ್ತೆ ಎಂದು ಆರೋಪಿಸಿದ್ದಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೂಡಾ ಇದಕ್ಕೆ ಉದಾಹರಣೆ ಎಂದು ಅವರು ಹೇಳಿದ್ದಾರೆ.

 

Share Post