CrimeNational

ಕಮರಿಗೆ ಬಿದ್ದ ಕಾರು; ಒಂದೇ ಕುಟುಂಬದ ನಾಲ್ವರ ದುರ್ಮರಣ

ಜಮ್ಮು; ಕಾರೊಂದು 700 ಅಡಿ ಆಳದ ಕಮರಿಗೆ ಉರುಳಿಬಿದ್ದು ದುರಂತ ನಡೆದಿಎದೆ. ಘಟನೆಯಲ್ಲಿ ಮಸೀದಿಯ ಇಮಾಮ್ ಮತ್ತು ಕುಟುಂಬದ ಮೂವರು ಸದಸ್ಯರು ಮೃತಪಟ್ಟಿದ್ದಾರೆ. ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ನಡೆದಿದೆ.

ಉಧಮ್ ಪುರ್ ಜಿಲ್ಲೆ ಚೆನಾನಿ ಪ್ರದೇಶದ ಪ್ರೇಮ್ ಮಂದಿರದ ಬಳಿ ಬೆಳಿಗ್ಗೆ 8.30ಕ್ಕೆ ಈ ದುರ್ಘಟನೆ ನಡೆದಿದೆ. ಮೃತರು ರಂಬನ್ ಜಿಲ್ಲೆಯ ಗೂಲ್ ಸಂಗಲ್ದಾನ್ ಗ್ರಾಮದಿಂದ ಜಮ್ಮುವಿಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಸ್ಕಿಡ್ ಆಗಿದ್ದು, 700 ಅಡಿ ಕಮರಿಗೆ ಬಿದ್ದಿದೆ. ಸಂಗಲ್ದಾನ್ ಜಾಮಿಯಾ ಮಸೀದಿಯ ಇಮಾಮ್ ಮುಫ್ತಿ ಅಬ್ದಲು ಹಮೀದ್ (32), ಅವರ ತಂದೆ ಮುಫ್ತಿ ಜಮಾಲ್ ದಿನ್ (65). ತಾಯಿ ಹಜರಾ ಬೇಗಂ (60), ಆದಿಲ್ ಗುಲ್ಜಾರ್ (16) ಮೃತರು.

Share Post