BengaluruCrime

ವಿಧಾನಸೌಧದ ಬಳಿ ರಾಬರಿ ಯತ್ನ; ಆರೋಪಿಗಳಿಗಾಗಿ ಹುಡುಕಾಟ

ಬೆಂಗಳೂರು; ಬೆಳ್ಳಂ ಬೆಳಗ್ಗೆ 5 ಗಂಟೆ ಸುಮಾರಿಗೆ ವಿಧಾನಸೌಧ ಬಳಿಯ ಮೀಸೆ ತಿಮ್ಮಯ್ಯ ಸರ್ಕಲ್ ಬಳಿ ಸುನಿಲ್ ಕುಮಾರ್ ಎಂಬುವರರ ಮೇಲೆ ರಾಬರಿಯತ್ನ ನಡೆದಿದೆ. ಹೂವು ತರಲು ಮಾರುಕಟ್ಟೆಗೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

ಸುನಿಲ್‌ ಕುಮಾರ್‌ ಅವರು ಬಾಣಸವಾಡಿಯಿಂದ ಸಿಟಿ ಮಾರ್ಕೆಟ್‌ಗೆ ಹೋಗುತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ್ದಾರೆ. ತಿಮ್ಮಯ್ಯ ಸರ್ಕಲ್‌ ಬಳಿ ಸುನಿಲ್‌ ಅವರ ಬೈಕ್‌ನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಬೈಕ್‌ ಕೀ ಕಿತ್ತುಕೊಂಡು ರಾಬರಿ ಮಾಡಲು ಯತ್ನಿಸಿದ್ದಾರೆ.

ಸುನಿಲ್‌ ಕುಮಾರ್‌ ಪ್ರತಿರೋಧ ವ್ಯಕ್ತಪಡಿಸಿದ್ದು, ಈ ವೇಳೆ ಆರೋಪಿಗಳು ಚಾಕುವಿನಿಂದ ಹೆದರಿಸಿದ್ದಾರೆ. ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ. ಈ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Post