CrimeNational

ಶ್ರದ್ಧಾ ವಾಕರ್‌ ಹತ್ಯೆ ಆರೋಪಿ ಅಫ್ತಾಬ್‌ ಕೊಲೆಗೆ ಯತ್ನ

ನವದೆಹಲಿ; ಶ್ರದ್ಧಾ ವಾಕರ್‌ ಭೀಕರ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲ ಕೊಲೆಗೆ ಕೆಲ ಯುವಕರು ಯತ್ನಿಸಿದ್ದಾರೆ. ಕತ್ತಿ ಹಿಡಿದುಕೊಂಡು ಬಂದಿದ್ದ ಯುವಕರ ಗುಂಪೊಂದು ಪೊಲೀಸ್ ವ್ಯಾನ್ ದಾಳಿ ಮಾಡಿದೆ. ದೆಹಲಿಯ ರೋಹಿಣಿಯಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದ ಬಳಿ ಈ ಘಟನೆ ನಡೆದಿದೆ.

ಆರೋಪಿಗೆ 2ನೇ ಪಾಲಿಗ್ರಾಫ್ ಪರೀಕ್ಷೆ ಮುಗಿಸಿ ಜೈಲಿಗೆ ಕರೆದೊಯ್ಯುವಾಗ ಯುವಕರು ಪೊಲೀಸ್‌ ವ್ಯಾನ್‌ ಮೇಲೆ ದಾಳಿ ಮಾಡಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ದಾಳಿಯನ್ನು ತಡೆದಿದ್ದಾರೆ. ಆರೋಪಿ ಅಫ್ತಾಬ್‌ನನ್ನು ಅಲ್ಲಿಂದ ಬಚಾವ್‌ ಮಾಡಿದ್ದಾರೆ. ದಾಳಿಗೆ ಯತ್ನಿಸಿದ ಕೆಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Share Post