BengaluruCrime

ಕಳ್ಳಿ ಕಳ್ಳಿ ಎನ್ನುತ್ತಿದ್ದ ಜನ; ಆಕ್ರೋಶಗೊಂಡ ಪತಿಯಿಂದಲೇ ಪತ್ನಿಯ ಹತ್ಯೆ

ಬೆಂಗಳೂರು; ಪತ್ನಿಯ ವಿರುದ್ಧ ಕಳ್ಳತನ ಆರೋಪ ಕೇಳಿಬಂದಿತ್ತು. ಹೀಗಾಗಿ ಮನೆಯನ್ನೇ ಬದಲಾಯಿಸಿದ್ದರು. ಆದರೂ ಗೊತ್ತಿದ್ದವರೆಲ್ಲಾ ಪತ್ನಿಯನ್ನು ಕಳ್ಳಿ ಕಳ್ಳಿ ಅಂತಾನೇ ಮೂದಲಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಗಂಡ, ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಇಂತದ್ದೊಂದು ಕೃತ್ಯ ನಡೆದಿದೆ.

ಮಂಗಳೂರು ಮೂಲದ ಸರಿತಾ ಎಂಬುವವರೇ ಕೊಲೆಗೀಡಾದ ಮಹಿಳೆ. ಪತಿ ತಾರಾನಾಥ್‌ ಕೊಲೆ ಮಾಡಿದ ಆರೋಪಿ. ವೈಟ್‌ ಫೀಲ್ಡ್‌ನ ಬಾಡಿಗೆ ಮನೆಯಲಿ ಈ ಕೊಲೆ ಮಾಡಲಾಗಿದೆ. ಪತ್ನಿಯ ಕುತ್ತಿಗೆ ಬಿಗಿದು ತಾರಾನಾಥ್‌ ಕೊಲೆ ಮಾಡಿದ್ದಾನೆ.

ಈ ಹಿಂದೆ ಇದ್ದ ಮನೆ ಬಳಿ ಸರಿತಾ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ ತಾರಾನಾಥ್‌ ಅವರು ಮನೆಯಲ್ಲಿ ವೈಟ್‌ಫೀಲ್ಡ್‌ಗೆ ಶಿಫ್ಟ್‌ ಮಾಡಿದ್ದರು. ಆದರೂ ಸಂಬಂಧಿಕರು, ಗೊತ್ತಿದ್ದವರು ಸರಿತಾಳನ್ನು ಕಳ್ಳಿ ಕಳ್ಳಿ ಎಂದೇ ವ್ಯಂಗ್ಯವಾಡುತ್ತಿದ್ದಾರೆ. ಇದರಿಂದ ತಾರಾನಾಥ್‌ ರೋಸಿಹೋಗಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ತಾರಾನಾಥ್‌ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

 

Share Post